ಹೊನ್ನಾವರ : ಹಿರಿಯರ ದಿನಾಚರಣೆ ಅಂಗವಾಗಿ ಗುಣವಂತೆಯ ಒಕ್ಕಲಿಗರ ಸಭಾಭವನದಲ್ಲಿ ದಿನಾಂಕ 24.08.2025 ರವಿವಾರ ಲಯನ್ಸ್ ಕ್ಲಬ್ ಹೊನ್ನಾವರ, ಆರ್ಟ್ ಆಫ್ ಲಿವಿಂಗ್ ಬೆಂಗಳೂರು, ಸಮರ್ಪಣಾ ವೇದಿಕೆ ಗುಣವಂತೆ, ಕನ್ನಡ ಸಾಹಿತ್ಯ ಪರಿಷತ್, ಹೊನ್ನಾವರ ಮತ್ತು ಶ್ರೀ ಸದ್ಗುರು ಸೇವಾ ಅಭಿವೃದ್ಧಿ ಟ್ರಸ್ಟ್ ನೀಲಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಬೆಳಿಗ್ಗೆ 9 ಗಂಟೆಯಿAದಲೇ ಆರಂಭಗೊಳ್ಳುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ, ಕಣ್ಣು, ದಂತ, ಮಧುಮೇಹ, ಮಕ್ಕಳ ಆರೋಗ್ಯ ಮತ್ತು ಲೆಪ್ರೋಸ್ಕೊಪಿಗೆ ಸಂಬAಧಪಟ್ಟ ವೈದ್ಯರು ತಪಾಸಣೆ ಮಾಡಿ ಯೋಗ್ಯ ಆರೋಗ್ಯ ಸಲಹೆ ಸೂಚನೆ ನೀಡಲಿದ್ದಾರೆ. ಹೊನ್ನಾವರದ ಖ್ಯಾತ ವೈದ್ಯರಾದ ಡಾ ಚಂದ್ರಶೇಖರ್ ಶೆಟ್ಟಿ, ಪ್ರಕಾಶ್ ನಾಯಕ,ಡಾ. ಪ್ರಮೋದ ಫಾಯ್ದೆ, ಡಾ.ನಾಗರಾಜ ಬೋಸ್ಕಿ ,ಡಾ. ವಿನಾಯಕ ರಾಯ್ಕರ್, ಡಾ. ಮಲ್ಲಿಕಾರ್ಜುನ ಮುಂತಾದ ವೈದ್ಯರು ತಪಾಸಣಾ ಶಿಬಿರದಲ್ಲಿ ಉಪಸ್ಥಿತರಿದ್ದು, ಆಗಮಿಸಿದ ಶಿಬಿರಾರ್ಥಿಗಳಿಗೆ ಆರೋಗ್ಯ ಸಲಹೆ ನೀಡಲಿದ್ದಾರೆ.
ಗುಣವಂತೆಯ ಸುತ್ತಮುತ್ತಲಿನ ಎಲ್ಲಾ ಹಳ್ಳಿಯ ಜನರು ಈ ಬೃಹತ್ ತಪಾಸಣಾ ಶಿಬಿರದ ಪ್ರಯೋಜನವನ್ನು ಪಡೆಯಬೇಕೆಂದು ಸಂಘಟಕರು ಕೇಳಿಕೊಂಡಿದ್ದಾರೆ.

More Stories
ಮಣಿಪಾಲ ಆರೋಗ್ಯ ಕಾರ್ಡ್ 2026: ನೋಂದಣಿ ಪ್ರಕ್ರಿಯೆ ಆರಂಭ; ಆಗಸ್ಟ್ 31 ಕೊನೆಯ ದಿನ
ನೀಲಗೋಡ ಯಕ್ಷಚೌಡೇಶ್ವರಿ ಸನ್ನಿಧಿಯಲ್ಲಿ ಆಷಾಢ ಅಮವಾಸ್ಯೆ ವಿಶೇಷ ಪೂಜೆ: ಭಕ್ತರ ಕಷ್ಟ ಕಾರ್ಪಣ್ಯ ನೀಗಿಸುವ ಶಕ್ತಿ ಕ್ಷೇತ್ರ
ಹೊನ್ನಾವರ ತಾಲೂಕಾ ಒಕ್ಕಲಿಗರ ಸಂಘಕ್ಕೆ ನೂತನ ಆಡಳಿತ ಮಂಡಳಿ ಆಯ್ಕೆ: ಅಧ್ಯಕ್ಷರಾಗಿ ಕೃಷ್ಣ ಜಟ್ಟಿ ಗೌಡ ಅವಿರೋಧ ಆಯ್ಕೆ