September 10, 2026

ಬದಲಾಗುವ ಆಧುನಿಕ ಚಿಂತನೆಗಳಿಗಿಂತ ಭಾರತೀಯ ಪರಂಪರೆಯೇ ಸಾರ್ವಕಾಲಿಕ ಸತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ

ಗೋಕರ್ಣ: ಸೂರ್ಯ, ಚಂದ್ರ ಹಾಗೂ ಗಾಳಿಯ ಸಂಸರ್ಗವನ್ನು ಹೊಂದಿರುವ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ಈ ಸಂಪರ್ಕವಿಲ್ಲದ ನೀರು ಆರೋಗ್ಯಕ್ಕೆ ಅಯೋಗ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 9, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.

ನೀರಿನ ಜಲಚೈತನ್ಯ ಹಾಗೂ ಪ್ರಾಚೀನ ಜ್ಞಾನ: ಸೂರ್ಯ ಕಿರಣವು ಕ್ರಿಮಿನಾಶಕ ಹಾಗೂ ಜೀವ ಚೈತನ್ಯದ ಸೆಲೆಯಾದರೆ, ಚಂದ್ರ ಕಿರಣವು ನೀರಿಗೆ ತಂಪು ಹಾಗೂ ಔಷಧೀಯ ಗುಣಗಳನ್ನು ತುಂಬುತ್ತದೆ, ಗಾಳಿಯು ನೀರನ್ನು ಸ್ವಯಂ ಶುದ್ಧೀಕರಿಸುತ್ತದೆ. ಸಿಮೆಂಟ್ ಅಥವಾ ಪ್ಲಾಸ್ಟಿಕ್ ಟ್ಯಾಂಕ್‌ಗಳಲ್ಲಿ ಸೂರ್ಯನ ಬೆಳಕು ಬೀಳದಂತೆ ಸಂಗ್ರಹಿಸಿದ ನೀರನ್ನು ಬಳಸುವುದು ಸೂಕ್ತವಲ್ಲ. ಆಯುರ್ವೇದದಲ್ಲಿ ಹಿಮ, ಇಬ್ಬನಿ, ಮಳೆ, ನದಿ ನೀರು ಹಾಗೂ ಸುಶ್ರುತರು ಬೇರೆ ಬೇರೆ ದಿಕ್ಕಿನಲ್ಲಿ ಹರಿಯುವ ನೀರಿನ ಗುಣಾವಗುಣಗಳ ಕುರಿತು ವಿಸ್ತಾರವಾಗಿ ವಿವರಿಸಿದ್ದಾರೆ.

ಆಧುನಿಕ ಚಿಂತನೆ vs ಸಿದ್ಧಾಂತ: ಹತ್ತಾರು ವರ್ಷಗಳಿಗೊಮ್ಮೆ ಬದಲಾಗುವ ಆಧುನಿಕ ವಿಜ್ಞಾನದ ಚಿಂತನೆಗಳು ಸಿದ್ಧಾಂತಗಳಲ್ಲ. ಚರ್ಚೆ ಮತ್ತು ವಿಮರ್ಶೆಗಳ ನಂತರ ಸಿದ್ಧವಾಗುವ ಸಿದ್ಧಾಂತವೇ ಸಾರ್ವಕಾಲಿಕ ಸತ್ಯವಾಗಿದ್ದು, ಭಾರತೀಯ ಪರಂಪರೆಯು ಯುಗಯುಗಾಂತರಗಳಿಂದ ಪರಿಪೂರ್ಣವಾಗಿದೆ.

ಭೋವಿ ಸಮಾಜದಿಂದ ಸ್ವರ್ಣ ಪಾದುಕಾಪೂಜೆ: ಶ್ರೀಮಠದ ಪಾರಂಪರಿಕ ಭಕ್ತರಾದ ಭೋವಿ ಸಮಾಜದ ವತಿಯಿಂದ ಶ್ರೀಗಳಿಗೆ ಸ್ವರ್ಣ ಪಾದುಕಾಪೂಜೆ ನೆರವೇರಿತು. ಅನಂತ ಬೈಂದೂರು, ನರಸಿಂಹ ಅಂಕೋಲೆಕರ, ಚಂದ್ರಶೇಖರ ಸಿರಸಿ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ನಾರಾಯಣ ಭಟ್ ಸಾದಂಗಾಯ ಕುಟುಂಬಸ್ಥರು ಗುರುಭಿಕ್ಷಾ ಸೇವೆ ಸಮರ್ಪಿಸಿದರೆ, ದಿನಪ್ರಧಾನರಾಗಿ ಬಾಬು ಹೆಗಡೆ ಅಳವಳ್ಳಿ ದಂಪತಿಗಳು ಹಾಗೂ ಉದ್ಯಮಿ ನಿಡ್ಲೆ ರಾಮ ಭಟ್, ರವಿಶಂಕರ್ ಭಟ್ ಕಡತೋಕ, ಮುರಳೀಧರ್ ಪ್ರಭು, ಸುಬ್ರಾಯ್ ಭಟ್ ಕೊಣಾರೆ, ವಿ.ಎಮ್ ಹೆಗಡೆ ಆಲ್ಮನೆ ಉಪಸ್ಥಿತರಿದ್ದರು.

    About The Author

    error: Content is protected !!