ಶಿರಸಿ: ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಶಿಕ್ಷಕ, ಇಲ್ಲಿನ ಡಯಟ್ ತರಬೇತಿ ಸಂಸ್ಥೆಯ ಉಪನ್ಯಾಸಕ ನಾರಾಯಣ ಪಿ.ಭಾಗ್ವತ ಅವರಿಗೆ ಉಡುಪಿಯ ಕನ್ನಡ ಭಾಷಾ ಶಿಕ್ಷಕರ ಸಂಘ ನೀಡುವ ಕನ್ನಡ ಜ್ಞಾನ ನೇಸರ ಪ್ರಶಸ್ತಿ ಪ್ರಕಟಿಸಲಾಗಿದೆ.
ಉಡುಪಿಯ ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ನ.30ರಂದು ನಡೆಸಲಾಗುವ ಸಮಾರಂಭದಲ್ಲಿ ನಾರಾಯಣಗುರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಂಜುನಾಥ ಭಂಡಾರಿ, ಸಂಘದ ಅಧ್ಯಕ್ಷ ಆನಂದ ಸಾಲಿಗ್ರಾಮ ಸೇರಿದಂತೆ ಅನೇಕರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮೂಲತಃ ಕುಮಟಾ ತಾಲ್ಲೂಕು ಹಂದಿಗೋಣ ಗ್ರಾಮದ ನಾರಾಯಣ ಭಾಗ್ವತ ಪ್ರಸ್ತುತ ಶಿರಸಿ ನಿವಾಸಿಯಾಗಿದ್ದು, ಮಾರಿಕಾಂಬಾ ಪ್ರೌಢಶಾಲೆಯಲ್ಲಿದ್ದಾಗ ಎರಡು ವರ್ಷದ ಹಿಂದೆ ರಾಷ್ಟ್ರ ಪ್ರಶಸ್ತಿ ಬಂದಿತ್ತು ಎಂಬುದು ಉಲ್ಲೇಖನೀಯ.

More Stories
ಅರಣ್ಯ ಇಲಾಖೆ ಕಾರ್ಯ ವೈಖರ್ಯಕ್ಕೆ ತೀವ್ರ ಅಸಮಧಾನ : ನಡುತೋಪು ಲೆಕ್ಕಕ್ಕೆ ಕೋಟಿಗಳಷ್ಟು ಹಣ ಖರ್ಚು: ಕೋಟಿ ಹೊಂಡ ಎಲ್ಲಿ, ನೆಟ್ಟಿದ್ದು ಎಷ್ಟು, ಬದುಕಿದ್ದು ಎಷ್ಟು- ಅರಣ್ಯವಾಸಿಗಳ ಪ್ರಶ್ನೆ
ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯ ರೋಗಿಗಳ ರೋಗನಿರೋಧಕ ಶಕ್ತಿ ಹೆಚ್ಚಳ – ಉದಯಶಂಕರ
ಕ್ಷಯರೋಗದ ಬಗ್ಗೆ ಜಾಗೃತಿ ಅಗತ್ಯ – ಡಾ.ಇಲಿಯಾಸ್ ಹವಾಲ್ದಾರ್.