ಭಟ್ಕಳ: ಹೈದರಾಬಾದ್ ಮೂಲದ ವಂದನ ಎಂಬ ಮಹಿಳೆ ರಚಿಸಿರುವ ಮಹಾ ಮುರುಡೇಶ್ವರ ಹಾಗೂ ರಾಜಗೋಪುರದ ಅದ್ಭುತ ಚಿತ್ರಕಲೆ ಭಕ್ತರ ಮನಸೂರೆಗೊಂಡಿದೆ.

ಮಹಾ ಮುರುಡೇಶ್ವರ ಶಿವನ ಭವ್ಯ ಪ್ರತಿಮೆ ಹಾಗೂ ದೇವಸ್ಥಾನದ ರಾಜಗೋಪುರವನ್ನು ಸ್ಥಳದಲ್ಲಿಯೆ ಒಂದೇ ಚಿತ್ರಪಟದಲ್ಲಿ ಆಕರ್ಷಕವಾಗಿ ಮೂಡಿಸಿರುವುದು ಈ ಕೃತಿಯ ವಿಶೇಷತೆ. ಚಿತ್ರದಲ್ಲಿ ಮುರುಡೇಶ್ವರ ದೇವಾಲಯದ ಮಹಾದೇವನ ಮೂರ್ತಿಯನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿರುವುದು ಗಮನ ಸೆಳೆಯುತ್ತದೆ.
ಇನ್ನೊಂದೆಡೆ, ರಾಜಗೋಪುರದ ಕಲಾತ್ಮಕ ವಿನ್ಯಾಸವನ್ನೂ ಸೂಕ್ಷ್ಮ ರೇಖಾಚಿತ್ರಗಳ ಮೂಲಕ ಮನೋಜ್ಞವಾಗಿ ಮೂಡಿಸಲಾಗಿದೆ. ವಂದನ ಅವರ ಈ ಚಿತ್ರಕಲೆ ಭಕ್ತರಲ್ಲಿ ಭಕ್ತಿ ಭಾವನೆ ಹೆಚ್ಚಿಸುವುದರ ಜೊತೆಗೆ, ಕಲಾ ಪ್ರೇಮಿಗಳಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.


More Stories
ಹೆದ್ದಾರಿ ಅಪಘಾತಕ್ಕೆ ಸ್ಕೂಟಿ ಸವಾರ ಬಲಿ: ಅವೈಜ್ಞಾನಿಕ ವಿನ್ಯಾಸ ಆರೋಪಿಸಿ ಭಟ್ಕಳದಲ್ಲಿ ಸಾರ್ವಜನಿಕರ ಆಕ್ರೋಶ, ಪ್ರತಿಭಟನೆ
ಲಂಡನ್ನಲ್ಲಿ ‘ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್’ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ಭಟ್ಕಳದ ಹೆಮ್ಮೆಯ ಯುವಕ ಪ್ರಜ್ವಲ್ ನಾಯ್ಕ
ಬೈಲೂರು ಕ್ಲಸ್ಟರ್ನ ಎಲ್ಲಾ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮುಂಬೈನ ಅನಿರುದ್ಧ ಬಾಪು ಟ್ರಸ್ಟ್ನಿಂದ ಉಚಿತ ನೋಟ್ಬುಕ್ ವಿತರಣೆ