ಭಟ್ಕಳ– ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಠ ಬಂಧ ಬ್ರಹ್ಮ ಕಲಶೋತ್ಸವ ಮೂರನೇ ದಿನ ದ.ಕ.ಜಿಲ್ಲೆಯ ಬಂಟ್ವಾಳದ ಪದಯಾನ ತಂಡದ ನೃತ್ಯಾರ್ಪಣಂ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ ಇವರ ನೇತೃತ್ವದಲ್ಲಿ ನಡೆದ ಒಂದುವರೆ ಗಂಟೆಗಳ ನೃತ್ಯ ಕಾರ್ಯಕ್ರಮ ಪ್ರೇಕ್ಷಕರನ್ನು ಭಕ್ತಿ ಪರವಶಗೊಳಿಸಿತು.
ಗುರುಗಳ ಜೊತೆ ಅವನಿ ಕೋಡಿಬೈಲು, ದೇವಿಕಾ ಕುರಿಯಾಜೆ,ಹೇಮಸ್ವಾತಿ ಕುರಿಯಾಜೆ ಇವರುಗಳು ನಡೆಸಿಕೊಟ್ಟ ದಶಾವತಾರ ನೃತ್ಯ ರೂಪಕವಂತೂ ಮೈನವಿರೇಳಿಸುವ ಅನುಭವ ನೀಡಿತು. ಕಾರ್ಯಕ್ರಮದ ನಂತರ ದೇವಸ್ಥಾನ ದ ವತಿಯಿಂದ ಅಧ್ಯಕ್ಷರಾದ ಎಸ್ ಬಿ.ಬೊಮ್ಮಾಯ ಸಮಿತಿ ಸದಸ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಸೇರಿ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು.

More Stories
ತೇಜಸ್ವಿ ನಾಯ್ಕರಿಗೆ ಕೇಂದ್ರದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪದೋನ್ನತಿ
ಬೈಲೂರಿನಲ್ಲಿ ಭಗವದ್ಗೀತೆಯ 3ನೇ ಅಧ್ಯಾಯ ಸಮರ್ಪಣೆ, ಮಾತೃವಂದನೆ ಕಾರ್ಯಕ್ರಮ ಯಶಸ್ವಿ
ಮೊಬೈಲ್ ಮೋಜಿನಿಂದ ಮಕ್ಕಳನ್ನು ಹೊರತರುವ ಅಗತ್ಯವಿದೆ : ರಾಮದಾಸ ಪ್ರಭು