April 16, 2026

ಅತಿವೇಗದ ಬೈಕ್‌ ಸವಾರಿಯಿಂದ ಅಪಘಾತ: ವೃದ್ಧರಿಗೆ ಗಾಯ


ಭಟ್ಕಳ: ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್‌ ಚಲಾಯಿಸಿದ ಪರಿಣಾಮ ವೃದ್ಧನೊಬ್ಬರಿಗೆ ಗಾಯಗಳಾದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಸುಜೋಯ್ ಬೈರಾಗಿ ಬೈಕ್‌ನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ವೇಳೆ, ಸಣ್ಣಭಾವಿ ಭಾಗದ ಐಸ್‌ ಫ್ಯಾಕ್ಟರಿ ಸಮೀಪ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗಪ್ಪ ಹೊನ್ನಯ್ಯ ದೇವಡಿಗ (66) ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ನಾಗಪ್ಪ ಅವರಿಗೆ ತಲೆ, ಹಣೆ ಹಾಗೂ ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ವಸಂತ ನಾಗಪ್ಪ ದೇವಡಿಗ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

About The Author

error: Content is protected !!