ಗೋಕರ್ಣ: ಮಳೆನೀರು ಅಮೃತವಿದ್ದಂತೆ, ಅದನ್ನು ಸುಯೋಗ್ಯವಾಗಿ ಸಂಗ್ರಹಿಸುವ ಬದಲು ಚರಂಡಿ ಪಾಲು ಮಾಡಲಾಗುತ್ತಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 7, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.
ಮಳೆನೀರಿನ ಅಪರಿಮಿತ ಚೈತನ್ಯ ಹಾಗೂ ಗುಣಗಳು: ಆಯುರ್ವೇದ ಆಚಾರ್ಯರ ಪ್ರಕಾರ ಮಳೆನೀರು ಸೇವನೆಗೆ ಸುಯೋಗ್ಯವಾಗಿದೆ. ಮಳೆನೀರು ತಂಪು, ಶುದ್ಧ, ರುಚಿಕರ, ಕಲ್ಮಶರಹಿತ, ಮಂಗಳಕರ ಹಾಗೂ ಜೀರ್ಣಕ್ಕೆ ಲಘು ಎಂಬ ಆರು ಪ್ರಮುಖ ಗುಣಗಳನ್ನು ಹೊಂದಿದೆ.
ಗಾಂಗ ಜಲ ಹಾಗೂ ಶೇಖರಣೆ: ಆಶ್ವಯುಜ ಮಾಸದಲ್ಲಿ ಹಾಗೂ ಅಗಸ್ತ್ಯ ನಕ್ಷತ್ರ ಕಾಣುವಾಗ ಬೀಳುವ ಮಳೆಯ ನೀರು ‘ಗಾಂಗ ಜಲ’ವಾಗಿದ್ದು, ಸೇವನೆಗೆ ಅತ್ಯುತ್ತಮವಾಗಿದೆ. ಮಳೆನೀರನ್ನು ಬಂಗಾರ, ಬೆಳ್ಳಿ, ಮಣ್ಣು ಅಥವಾ ಗಾಜಿನ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟರೆ ನೀರಿನ ಗುಣಗಳು ನಾಶವಾಗುವುದಿಲ್ಲ.

ನೀರಿನ ಮಾನಸಿಕ ಹಾಗೂ ಕಾಯಿಕ ಪ್ರಭಾವ: ದಣಿವು, ಆಯಾಸ ಹಾಗೂ ಗಾಬರಿಯಾದಾಗ ಮನುಷ್ಯನಿಗೆ ಸಮಾಧಾನ ನೀಡುವ ಮಹತ್ತರ ಶಕ್ತಿ ನೀರಿಗಿದೆ.
ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತರಾದ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೆ ದಂಪತಿಗಳು ದಿನಪ್ರಧಾನರಾಗಿ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.
About The Author


More Stories
ನದಿ ನೀರನ್ನು ತಡೆಯುವುದು ಅನರ್ಥಕ್ಕೆ ಕಾರಣ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಪ್ಲಾಸ್ಟಿಕ್ನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಗೋವಿನ ಉತ್ಪನ್ನಗಳು ಹಿಂಸೆಯ ವ್ಯಾಪ್ತಿಗೆ ಬರುವುದಿಲ್ಲ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ