ಹೊನ್ನಾವರ : “ಕ್ಷಯ, ಹೆಚ್.ಐ.ವಿ ಯಂತಹ ಗಂಭಿರ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೃಷ್ಠಿ ಸಂಸ್ಥೆಯಿAದ ಪೌಷ್ಠಿಕಾಂಶದ ಕಿಟ್ಗಳನ್ನು ನೀಡುತ್ತಿರುವುದು ಅನುಕರಣಿಯವಾಗಿದೆ” ಎಂದು ಹೊನ್ನಾವರ ತಾಲೂಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ|| ರಾಜೇಶಕಿಣಿ ಹೇಳಿದರು.
ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಸೃಷ್ಠಿ ಸಂಸ್ಥೆಯವರು ನೀಡಿದ ನ್ಯೂಟ್ರೆಸನ್ ಕಿಟ್ಗಳನ್ನು ಕ್ಷಯರೋಗದ ಮೇಲ್ವಿಚಾರಕರಾದ ರಾಜಶೇಖರ ನಾಯ್ಕರವರಿಗೆ ಹಸ್ತಾಂತರಿಸಿ ಮಾತನಾಡಿದ್ದರು “ಕ್ಷಯ ರೋಗಿಗಳು ಆರರಿಂದ ಒಂಬತ್ತು ತಿಂಗಳವರೆಗೆ ಔಷಧೋಪಾಚಾರಗಳನ್ನು ಮಾಡಬೇಕಾಗಿದ್ದು ಆ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶÀಗಳ ಅಗತ್ಯವಿರುತ್ತದೆ. ಅಂತವರಿಗೆ ನ್ಯೂಟ್ರಸನ್ ಕಿಟ್ಗಳನ್ನು ನೀಡುವದರ ಮೂಲಕ ಸೃಷ್ಠಿ ಸಂಸ್ಥೆ ಆರೋಗ್ಯಯುತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಿದೆ” ಎಂದು ಹೇಳಿದರು.
ನ್ಯೂಟ್ರೆಸನ್ ಕಿಟ್ಗಳನ್ನು ಸ್ವೀಕರಿಸಿ ಮಾತನಾಡಿದ ಕ್ಷಯರೋಗ ಮೇಲ್ವಿಚಾರಕರಾದ ರಾಜಶೇಖರ ನಾಯ್ಕ“ ಸೃಷ್ಠಿ ಸಂಸ್ಥೆ ನೀಡಿದ ಈ ಕಿಟ್ಗಳನ್ನು ಕ್ಷಯ ರೋಗಿಗಳಿಗೆ ನೀಡುವದರ ಮೂಲಕ ಅವರ ದೈಹಿಕ ಆರೋಗ್ಯ ಉತ್ತಮಗೊಳಿಸಲಾಗುವುದು. ಸೃಷ್ಠಿ ಸಂಸ್ಥೆಯ ಈ ಕೊಡುಗೆಯಿಂದ ಆರೋಗ್ಯದ ತೊಂದರೆಯಲ್ಲಿರುವವರಿಗೆ ತುಂಬಾ ಅನೂಕೂಲವಾಗಲಿದೆ” ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕಿನ ಆಯುಷ್ ವೈದ್ಯಾಧಿಕಾರಿಗಳಾದ ಡಾ|| ಗುರುದತ್ತ ಕುಲಕರ್ಣಿ, ಐಸಿಟಿಸಿ ಆಪ್ತಸಮಾಲೋಚರಾದ ವಿನಾಯಕ ಪಟಗಾರ, ಪ್ರಯೋಗ ಶಾಲಾ ತಂತ್ರಜ್ಷರಾದ ಉಮೇಶ ಕೆ, ರವಿ ನಾಯ್ಕ ಉಪಸ್ಥಿತರಿದ್ದರು.

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’