ಭಟ್ಕಳ: ಮುರುಡೇಶ್ವರ ಬೀಚ್ ಸಮೀಪ ಗಾಂಜಾ ಸೇವಿಸುತ್ತಿದ್ದ ತಮಿಳುನಾಡಿನ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳಕಿಗೆ ಬಂದಿದೆ.
ಆರೋಪಿತ ಜೆ. ಹರಿಶಕುಮಾರ,ತಮಿಳುನಾಡು ನಿವಾಸಿ, ಮುರುಡೇಶ್ವರ ಬೀಚ್ ಎಡಬದಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದನೆಂಬ ಮಾಹಿತಿ ಆಧಾರದಲ್ಲಿ ಪಿಎಸ್ಐ ಹಣಮಂತ ಬಿರಾದಾರ ನೇತೃತ್ವದ ತಂಡ ದಾಳಿ ನಡೆಸಿ ವಶಕ್ಕೆ ಪಡೆದರು.
ನಂತರ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಆರೋಪಿತನು ಗಾಂಜಾ ಸೇವಿಸಿದ್ದಾನೆಂಬುದು ದೃಢಪಟ್ಟಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

More Stories
ಮುರ್ಡೇಶ್ವರ ಬೀಚ್ನಲ್ಲಿ ಮಾ. ೪ರಂದು ನಮ್ಮೂರ ಹೋಳಿ ಸಂಭ್ರಮಾಚರಣೆ : ಪುಷ್ಪಲತಾ ವೈದ್ಯ
ಮುರುಡೇಶ್ವರ ಪಾಲಿಟೆಕ್ನಿಕ್ ನಲ್ಲಿ ಒಂದು ದಿನದ ಇನ್ಕುಬೇಷನ್ ಜಾಗೃತಿ ಕಾರ್ಯಕ್ರಮ
ಮುರ್ಡೇಶ್ವರದಲ್ಲಿ ಲಾಡ್ಜ್ ಮೇಲೆ ಪೊಲೀಸ್ ದಾಳಿ: ಇಬ್ಬರು ಮಹಿಳೆಯರ ರಕ್ಷಣೆ, ರೂಮ್ ಬಾಯ್ ಬಂಧನ