ಭಾವನಾ ಬೈಂದೂರು ಸುದ್ಧಿ : ಸುರಭಿ ರಿ. ಬೈಂದೂರು ಸಂಸ್ಥೆಯ ಬೆಳ್ಳಿಹಬ್ಬದ ವರ್ಷವನ್ನು ಸಂಭ್ರಮಿಸುತ್ತಿದ್ದು, ವರ್ಷವಿಡಿ ವಿವಿಧ ಸಾಂಸ್ಕೃತಿಕ ಸಾಹಿತ್ತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದೇ ಡಿಸೆಂಬರ್ 14ರಿಂದ 21ರ ತನಕ 08 ದಿನಗಳ ಕಾಲ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಠಿ ಗುರುವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.
ಸುರಭಿ ರಿ. ಬೈಂದೂರು ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿ ನಮ್ಮ ಸಂಸ್ಥೆ ಬೆಳ್ಳಿಹಬ್ಬದ ವರ್ಷವನ್ನು ಸಂಭ್ರಮಿಸುತ್ತಿದ್ದು, ವರ್ಷವಿಡಿ ವಿವಿಧ ಸಾಂಸ್ಕೃತಿಕ ಸಾಹಿತ್ತಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಯುತ್ತಿದ್ದು, ಇದೇ ಡಿಸೆಂಬರ್ 14ರಿಂದ 21ರ ತನಕ 08 ದಿನಗಳ ಕಾಲ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯನ್ನು ಆಯೋಜಿಸಿದೆ. ಬೈಂದೂರು ಯಡ್ತರೆಯ ಜೆ.ಎನ್.ಆರ್ ಕಲಾಮಂದಿರದ ಹೊರಾಂಗಣ ವೇದಿಕೆಯಲ್ಲಿ ಪ್ರತಿದಿನ ಸಂಜೆ 07:00ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ.
ಡಿಸೆಂಬರ್ 14ರ ಆದಿತ್ಯವಾರ ರಂಗಾಯಣ ಟ್ರಸ್ಟ್ ಮೈಸೂರು ಪ್ರಸ್ತುತಿಯ ನಾಟಕ “ಚಾಮಚೆಲುವೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ: ಡಾ. ಸುಜಾತ ಅಕ್ಕಿ, ನಿರ್ದೇಶನ ವಿಕಾಸ್ ಚಂದ್ರ, ಡಿಸೆಂಬರ್ 15ರ ಸೋಮವಾರ ಕಲಾರೋಹಣ ಶಿವಮೊಗ್ಗ ಪ್ರಸ್ತುತಿಯ ನಾಟಕ “ನನ… ನನಮ್ ರಸ್ತೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ: ಡಾ. ಗಜಾನನ ಶರ್ಮಾ ಬೆಂಗಳೂರು, ನಿರ್ದೇಶಕ ಬಿ.ಆರ್. ರೇಣುಕಪ್ಪ, ಡಿಸೆಂಬರ್ 16ರ ಮಂಗಳವಾರ ಸುಮನಸ ಕೊಡವೂರು ಉಡುಪಿ ಪ್ರಸ್ತುತಿಯ ನಾಟಕ “ಈದಿ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಸಮೀರ್ ಪೇನ್ಕರ್ ಮುಂಬೈ, ಕನ್ನಡಕ್ಕೆ: ಜಯಶ್ರೀ ಇಡ್ಕಿದು, ನಿರ್ದೇಶನ: ವಿದ್ದು ಉಚ್ಚಿಲ, ಡಿಸೆಂಬರ್ 17ರ ಬುಧವಾರ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಬೆಂಗಳೂರು ಪ್ರಸ್ತುತಿಯ ನಾಟಕ “ಮಾರಿಕಾಡು” ಪ್ರದರ್ಶನಗೊಳ್ಳಿದೆ.
ನಾಟಕ ಮೂಲ ಶೇಕ್ಸ್ʼಪಿಯರ್, ರಚನೆ: ಡಾ. ಚಂದ್ರಶೇಖರ ಕಂಬಾರ್, ನಿರ್ದೇಶಕ: ಮಾಲತೇಶ್ ಬಡಿಗೇರ್, ಡಿಸೆಂಬರ್ 18ರ ಗುರುವಾರ ಸಹ್ಯಾದ್ರಿ ರಂಗತAಡ ರಿ. ಶಿವಮೊಗ್ಗ ಪ್ರಸ್ತುತಿಯ ನಾಟಕ “ರಾವಿ ನದಿಯ ದಂಡೆಯಲ್ಲಿ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಅಷ್ಟರ್ ವಜಾ ಹತ್ ನವದೆಹಲಿ, ನಿರ್ದೇಶನ: ಕಾಂತೇಶ ಕದರಮಂಡಲಗಿ, ಡಿಸೆಂಬರ್ 19ರ ಶುಕ್ರವಾರ ಸ್ಪಂದನ ರಿ. ಸಾಗರ ಪ್ರಸ್ತುತಿಯ ನಾಟಕ “ಪ್ರಾಣ ಪದ್ಮಿನಿ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಮತ್ತು ನಿರ್ದೇಶನ: ಮಂಜುನಾಥ ಎಲ್. ಬಡಿಗೇರ, ಡಿಸೆಂಬರ್ 20ರ ಶನಿವಾರ ಕ್ರಾನಿಕಲ್ಸ್ ಆಫ್ ಇಂಡಿಯಾ ರಿ. ಬೆಂಗಳೂರು ಪ್ರಸ್ತುತಿಯ ನಾಟಕ “ಶಿವೋಹಂ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಮತ್ತು ನಿರ್ದೇಶನ: ಗಣೇಶ್ ಮಂದಾರ್ತಿ, ಡಿಸೆಂಬರ್ 21ರ ಆದಿತ್ಯವಾರ ನಮ್ದೇ ನಟನೆ ರಿ. ಬೆಂಗಳೂರು ಪ್ರಸ್ತುತಿಯ ನಾಟಕ “ಮಗಳೆಂಬ ಮಲ್ಲಿಗೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಮತ್ತು ನಿರ್ದೇಶನ: ರಾಜೇಂದ್ರ ಕಾರಂತ್ ಬೆಂಗಳೂರು ಪ್ರದರ್ಶನಗೊಳ್ಳಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಪತ್ರಿಕಾ ಗೋಷ್ಠಿಯಲ್ಲಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಉಪಾಧ್ಯಕ್ಷರಾದ ಲಕ್ಷö್ಮಣ ಕೊರಗ ಬೈಂದೂರು, ಸುರೇಶ್ ಹುದಾರ್ ಯಡ್ತರೆ, ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಜಿ. ಮಯ್ಯಾಡಿ, ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಪಡುವರಿ ಉಪಸ್ಥಿತರಿದ್ದರು.
ಸುರಭಿ ರಿ. ಬೈಂದೂರು ನಿರ್ದೇಶಕ ಸುಧಾಕರ ಪಿ ಬೈಂದೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ವರದಿ : ಎಚ್. ಸುಶಾಂತ್ ಆಚಾರ್ ಬೈಂದೂರು

More Stories
ಕೇಂದ್ರ ಸರಕಾರದ ವಿವಿಧ ಯೋಜನೆಗಳ ಸವಲತ್ತು ವಿತರಣಾ ಕಾರ್ಯಕ್ರಮ
ಬೈಂದೂರು ರೈತ ಸಂಘದ 65 ದಿನಗಳ ಪ್ರತಿಭಟನೆಗೆ ಸಂಸದ ಬಿ.ವೈ ರಾಘವೇಂದ್ರ ಭೇಟಿ
ಮಹತೋಭಾರ ಸೇನೇಶ್ವರ ದೇವಸ್ಥಾನ ಉತ್ಸವ ಮೂರ್ತಿ ವನಭೋಜನ