ಭಟ್ಕಳ: ಮುರುಡೇಶ್ವರದಲ್ಲಿ ನಡೆಯುವ ಮಹಾಶಿವರಾತ್ರಿ–2026ರ ಅಂಗವಾಗಿ ದೇವಸ್ಥಾನಕ್ಕೆ ಹಾಗೂ ಉತ್ಸವಕ್ಕೆ ಆಗಮಿಸುವ ಭಕ್ತರು ಮತ್ತು ಸಾರ್ವಜನಿಕರಿಗೆ ವಿಶೇಷ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಕ್ಯೂಆರ್ ಕೋಡ್ ಹೊಂದಿದ ಬ್ಯಾನರ್ ಬಿಡುಗಡೆ ಮಾಡಲಾಗಿದೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಪಾರ್ಕಿಂಗ್ ಸ್ಥಳಗಳ ಮಾಹಿತಿ, ಪೊಲೀಸ್ ಸಹಾಯ ಕೇಂದ್ರ, ಆಸ್ಪತ್ರೆ ವಿವರ, ಬೀಚ್ ಪ್ರದೇಶದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು, ಪ್ರಮುಖ ದೂರವಾಣಿ ಸಂಖ್ಯೆಗಳು, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣದ ಮಾಹಿತಿ ಸೇರಿದಂತೆ ಅಗತ್ಯ ವಿವರಗಳು ಲಭ್ಯವಾಗಲಿವೆ.

ಈ ಬ್ಯಾನರ್ಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದ್ದು, ಭಕ್ತರಿಗೆ ತ್ವರಿತವಾಗಿ ಮಾಹಿತಿ ಪಡೆಯಲು ಅನುಕೂಲವಾಗಲಿದೆ.
ಕ್ಯೂಆರ್ ಕೋಡ್ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಪುಷ್ಪಲತಾ ವೈದ್ಯ, ಎಸ್.ಎಸ್. ಕಾಮತ್, ಶಂಕರ ಭಟ್ರಹಿತ, ನಯನಾ ನಾಯ್ಕ, ಮಂಜುನಾಥ ನಾಯ್ಕ, ಮಂಜುನಾಥ ಶೆಟ್ಟಿ ಹಾಗೂ ಸಬ್ ಇನ್ಸಪೆಕ್ಟರ್ ಹಣಮಂತ ಬೀರಾದರ ಉಪಸ್ಥಿತರಿದ್ದರು.

More Stories
ಮುರುಡೇಶ್ವರ: ಆರ್. ಎನ್. ಶೆಟ್ಟಿ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪದಗ್ರಹಣ ಸಮಾರಂಭ
ಅಕ್ರಮ ಕಸ ಸುರಿಯಲು ಬಂದ ವಾಹನ ಗ್ರಾಮಸ್ಥರ ವಶಕ್ಕೆ
17 ವರ್ಷಗಳ ದೇಶಸೇವೆ ಮುಗಿಸಿ ತವರಿಗೆ ಮರಳಿದ ಕಮಾಂಡೋ ಹರೀಶ್ ನಾಯ್ಕಗೆ ಅದ್ದೂರಿ ಸ್ವಾಗತ