April 16, 2026

ಬರ್ಗಿ ಸಂಸ್ಕೃತೋತ್ಸವದಲ್ಲಿ ಅಭಿನಂದನೆಗೊಂಡ ನವ್ಯ – ನಾಗಶ್ರೀ


ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಸ್ಕೃತವನ್ನು ಕಲಿತು ಸಾಧನೆಯನ್ನು ತೋರಿ , ಕಾಲೇಜಿನಲ್ಲಿ ಸಂಸ್ಕೃತ ಕಲಿಕೆಯನ್ನು ಮುಂದುವರೆಸಿದ ನಾಗಶ್ರೀ ನಾಗೇಶ ಹರಿಕಂತ್ರ ಹಾಗೂ ನವ್ಯ ಸುರೇಶ ಗಾವಡಿಯವರಿಗೆ ಸ್ಥಳೀಯ ಗ್ರಾಮ ಪಂಚಾಯತದ ಸಭಾಭವನದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಕರ್ನಾಟಕ ಸಂಸ್ಕೃತ ಪರಿಷತ್, ಕನ್ನಡ ಭಾರತಿ ಪ್ರಪಂಚ, ಬರ್ಗಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘ, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ ಹಾಗೂ ಗಜಾನನ ನಾಯಕ್ ಅಭಿಮಾನಿ ಬಳಗದ ಸಯುಕ್ತ ಆಶ್ರಯದಲ್ಲಿ ಆಯೋಜಿಸಿದ “ಬರ್ಗಿ ಸಂಸ್ಕೃತೋತ್ಸವ 2026″ -ರ ಸಮಾರಂಭದಲ್ಲಿ ಕ್ರಮವಾಗಿ ” ಸಂಸ್ಕೃತ ಸಂಸ್ಕಾರ ಸುದರ್ಶಿನಿ ” ಹಾಗೂ ” ಸಂಸ್ಕೃತ ಸುದೀಪ್ತಿ” – ಉಪಾದಿಯೊಂದಿಗೆ ಅಭಿನಂದಿಸಲಾಯಿತು.


ಅವರಿಗೆ ಉತ್ತರ ಕನ್ನಡ ಜಿಲ್ಲಾ ಪಂಚಾಯತದ ಮಾಜಿ ಸದಸ್ಯರಾದ ಗಾಯತ್ರಿ ಗೌಡರವರು ಪದಕ, ಫಲಕ, ಪ್ರಮಾಣ ಪತ್ರ, ಶಾಲು ಹಾಗೂ ನಗದು ಬಹುಮಾನದೊಂದಿಗೆ ಸಂಸ್ಕೃತ ಪ್ರದೀಪ ಪುರಸ್ಕಾರವನ್ನು ಪ್ರದತ್ತಗೊಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತದ ಮಾಜಿ  ಸದಸ್ಯರಾದ ಪ್ರದೀಪ ನಾಯಕ್ ದೇವರಬಾವಿ, ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಕ್ರಿಯಾಶೀಲ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರು, ತಾಲ್ಲೂಕಾ ಪಂಚಾಯತದ ಮಾಜಿ ಅಧ್ಯಕ್ಷರಾದ ವಿಜಯಾ ಪಟಗಾರ್, ಕಾರ್ಯಕ್ರಮದ ಪ್ರಧಾನ ಸಂಘಟಕರಾದ ಕನ್ನಡ ಭಾರತೀ ಪ್ರಪಂಚದ ಸಂಚಾಲಕರಾದ ನಾಗನೆಲೆಯ ನಾರಾಯಣ ನಾಗು ನಾಯಕ ಹಾಗೂ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ಉಪಸ್ಥಿತರಿದ್ದರು.

About The Author

error: Content is protected !!