ಭಟ್ಕಳ: ಶಮ್ಸ್ ಪಿಯು ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ ನಡೆದ ಎಡುಶೆಫ್ ಸ್ಪರ್ಧೆ ಭಟ್ಕಳದ ಪಾಕಪರಂಪರೆಯ ಸಂಭ್ರಮ ಕಾರ್ಯಕ್ರಮವು ನವಾಯತ್ ಸಮುದಾಯದ ಸಾಂಪ್ರದಾಯಿಕ ನಾಷ್ಟಾಗಳ ಸುವಾಸನೆ ಮತ್ತು ಸವಿಯನ್ನು ಮತ್ತೆ ಜೀವಂತಗೊಳಿಸಿತು.
ಬೆಳಿಗ್ಗೆ 9:30ಕ್ಕೆ ಪ್ರಾರಂಭವಾದ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಟ್ಕಳಿ ನಾಷ್ಟಾ ಎಂಬ ವಿಷಯದಡಿ ಪಾರಂಪಾರಿಕ ನವಾಯತ್ ತಿಂಡಿಗಳನ್ನು ತಯಾರಿಸಿ ಪ್ರದರ್ಶಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಸ್ವಚ್ಛತೆ ಮತ್ತು ಕಲಾತ್ಮಕ ಅಲಂಕಾರ, ರುಚಿ ಮತ್ತು ಸುವಾಸನೆ, ಹಾಗೂ ವಿಷಯಕ್ಕೆ ಹೊಂದಿಕೆ (ಪದಾರ್ಥಗಳು ಮತ್ತು ತಯಾರಿಕಾ ವಿಧಾನವನ್ನು ವಿವರಿಸುವ ಸಾಮರ್ಥ್ಯ)ಆಧಾರದ ಮೇಲೆ ಮೌಲ್ಯಮಾಪನ ನಡೆಯಿತು. ಆಕರ್ಷಕವಾಗಿ ಅಲಂಕರಿಸಲ್ಪಟ್ಟ ತಟ್ಟೆಗಳಲ್ಲಿ ತಲ್ಲಾ ಶಯಿಯೋ, ಉರ್ದಾ ಅಪ್ಪೋ, ಮಲ್ಪುರಾ ಅಪ್ಪೋ, ಗೊಡಾನ್, ಪುಟ್ಟು, ತರಿ, ಶೀರ, ಸಾತ್ಪದ್ರ ನವಾಯರೋ, ಮುಟ್ಕುಳೆ, ಖುಬುಸಾ ಪೋಲಿ, ಹಾಲ್ದಿ ಪಾನ ನವಾಯರೋ, ತರಿ ಪೋಲಿಸೇರಿದಂತೆ ಅನೇಕ ಸಾಂಪ್ರದಾಯಿಕ ನಾಷ್ಟಾಗಳು ಹಬ್ಬದ ಬಣ್ಣ ತುಂಬಿದವು.
ಮೌಲ್ಯಮಾಪನದ ನಂತರ ವಿದ್ಯಾರ್ಥಿಗಳ ತಯಾರಿಸಿದ ತಿನಿಸುಗಳನ್ನು ಸಾರ್ವಜನಿಕರಿಗೆಪ್ರತಿ ಪ್ಲೇಟ್ ಗೆ ರೂ.30ಕ್ಕಿಂತ ಕಡಿಮೆ ದರದಲ್ಲಿ ಮಾರಾಟಕ್ಕೆಇಡಲಾಗಿದ್ದು, ಎಲ್ಲರಿಗೂ ಭಟ್ಕಳದ ಪ್ರಸಿದ್ಧ ನಾಷ್ಟಾಗಳ ಸವಿಯನ್ನು ಅನುಭವಿಸುವ ಅವಕಾಶ ಲಭಿಸಿತು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಾಂಶುಪಾಲ ಲಿಯಾಖತ್ ಅಲಿ, ನವಾಯತ್ ಪಾಕಶೈಲಿ ನಮ್ಮ ಪಾರಂಪರ್ಯದ ಅಮೂಲ್ಯ ಸಂಪತ್ತು. ಯುವ ಪೀಳಿಗೆಯವರು ಇಂತಹ ಕಾರ್ಯಕ್ರಮಗಳ ಮೂಲಕ ತಮ್ಮ ಮೂಲಗಳನ್ನು ಮರೆಯದೇ ಉಳಿಸಬೇಕು ಎಂದು ಹೇಳಿದರು.


More Stories
ಮಾರುಕೇರಿ ಹೂತ್ಕಳದ ಧನ್ವಂತರಿ ದೇವಾಲಯದಲ್ಲಿ ಜುಲೈ 25 ರಂದು ‘ಲಕ್ಷ ತುಳಸಿ ಅರ್ಚನೆ’ ಹಾಗೂ ‘ಸ್ವರ್ಣ ಪಾದುಕಾ ಭಿಕ್ಷೆ’
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ‘ಕೃಷ್ಣ ಯಜುರ್ವೇದ ಸ್ವಾಹಾಕಾರ’ ಧಾರ್ಮಿಕ ಮಹೋತ್ಸವ ಸಂಪನ್ನ
ಸಾಧಕ ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರ-ಮಾಲಕರ ಸಂಘದಿಂದ ಸನ್ಮಾನ