May 12, 2026

ಒಂದು ವರ್ಷದ ಬಳಿಕ ಭಟ್ಕಳಕ್ಕೆ ನೂತನ ಎಸಿ ನೇಮಕ

ಭಟ್ಕಳ: ಕಳೆದ ಒಂದು ವರ್ಷದಿಂದ ಖಾಲಿಯಾಗಿದ್ದ ಭಟ್ಕಳ ಉಪವಿಭಾಗಾಧಿಕಾರಿ ಹುದ್ದೆಗೆ ಸರ್ಕಾರ ನೇಮಕ ಮಾಡಿದ್ದು, ಜೆ. ಮಹೇಶ್ (ಕೆಎಎಸ್ ಕಿರಿಯ ಶ್ರೇಣಿ) ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಕಳೆದ ವರ್ಷ ಡಾ. ನಯನ್ ಎನ್ ವರ್ಗಾವಣೆಯಾದ ಬಳಿಕ ಎಸಿ ಹುದ್ದೆ ಖಾಲಿಯಾಗಿತ್ತು. ಬಳಿಕ ಶಿರಸಿ ಉಪವಿಭಾಗಾಧಿಕಾರಿಯಾಗಿದ್ದ ಕುಮಾರಿ ಕಾವ್ಯರಾಣಿ ಅವರಿಗೆ ಭಟ್ಕಳದ ಪ್ರಭಾರಿ ಜವಾಬ್ದಾರಿ ನೀಡಲಾಗಿತ್ತು. ಅವರ ಇತ್ತೀಚಿನ ವರ್ಗಾವಣೆಯಿಂದ ಹುದ್ದೆ ಮತ್ತೆ ತೆರವಾಗಿತ್ತು.
ಈ ನಡುವೆ ಹೊನ್ನಾವರ ತಹಶೀಲ್ದಾರ ಪ್ರವೀಣ್ ಕರಂಡೆ ಅವರಿಗೆ ಪ್ರಭಾರಿ ಎಸಿ ಚಾರ್ಜ್ ನೀಡಲಾಗಿತ್ತು. ರಾಜ್ಯ ಸರ್ಕಾರದ ವರ್ಗಾವಣೆ ಆದೇಶದಂತೆ ಭಟ್ಕಳಕ್ಕೆ ಆಗಮಿಸಿದ ಜೆ. ಮಹೇಶ್ ಅವರು ಕಚೇರಿಯಲ್ಲಿ ಕಡತಗಳಿಗೆ ಸಹಿ ಹಾಕುವ ಮೂಲಕ ಅಧಿಕಾರ ಸ್ವೀಕರಿಸಿದರು.
ಅವರು ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ, ಆಯುಕ್ತರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

About The Author

error: Content is protected !!