ಕತಾರ್ : ಶಿಕ್ಷಣವನ್ನು ಬೆಂಬಲಿಸುವ ಮತ್ತು ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿ, ಬಿಲ್ಲವಾಸ್ ಕತಾರ್, ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ (ರಿ.) ಸಹಯೋಗದೊಂದಿಗೆ, ಅರ್ಹ ವಿದ್ಯಾರ್ಥಿಗಳಿಗಾಗಿ ಒಂದು ಭವ್ಯ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿತು. ಈ ಕಾರ್ಯಕ್ರಮವು ಮೇ 3, 2026 ರಂದು ಕುದ್ರೋಳಿಯ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ನಡೆಯಿತು. ಗಣ್ಯರು, ಸಮುದಾಯದ ಮುಖಂಡರು, ಪೋಷಕರು ಮತ್ತು ವಿದ್ಯಾರ್ಥಿಗಳ ಸ್ಪೂರ್ತಿದಾಯಕ ಸಹಭಾಗಿತ್ವದೊಂದಿಗೆ ಸಭೆಯು ಎಲ್ಲರ ಗಮನ ಸೆಳೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವಾಸ್ ಕತಾರ್ನ ಅಧ್ಯಕ್ಷೆ ಶ್ರೀಮತಿ ಅಪರ್ಣ ಶರತ್ ವಹಿಸಿದ್ದರು. ಇವರ ಬಹು ಪ್ರತಿಭಾ ನಾಯಕತ್ವವು ಮತ್ತು ವೈವಿಧ್ಯಮಯ ದೃಷ್ಟಿಕೋನವು ಸಮುದಾಯದ ಬೆಳವಣೀಗೆಯ ಒಂದು ಉದಾರ ಮನೋಭಾವದ ಉದಾಹರಣೆಯಾಗಿತ್ತು. ಅವರ ಉಪಸ್ಥಿತಿಯು ಯುವ ಫಲಾನುಭವಿಗಳಿಗೆ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡಿತು.
ಕಾರ್ಯಕ್ರಮವನ್ನು ಕೆಳಕಂಡ ಗೌರವಾನ್ವಿತ ಅತಿಥಿಗಳ ಉಪಸ್ಥಿತಿಯು ಮತ್ತಷ್ಟು ವೈಭವೀಕರಿಸಿತು:
• ಶ್ರೀ ಜಯರಾಜ್ ಎಚ್. ಸೋಮಸುಂದರA, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರು
• ಶ್ರೀ ಉಮಾನಾಥ್ ಕೋಟ್ಯಾನ್, ಗೌರವಾನ್ವಿತ. ಶಾಸಕ, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರ
• ಶ್ರೀ ಪದ್ಮರಾಜ್ ಆರ್. ಪೂಜಾರಿ, ಕೋಶಾಧಿಕಾರಿ, ಶ್ರೀ ಗೋಕರ್ಣನಾಥ ಕ್ಷೇತ್ರ
• ಡಾ. ರಮೀಳಾ ಶೇಖರ್, ಮಾನಸಿಕ ಆರೋಗ್ಯ ವೃತ್ತಿಪರರು, ಮಾನಶಾಂತಿ, ಮಂಗಳೂರು
• ಶ್ರೀ ದಿವಾಕರ ಪೂಜಾರಿ, ಸ್ಥಾಪಕ ಅಧ್ಯಕ್ಷರು, ಬಿಲ್ಲವಾಸ್ ಕತಾರ್
• ಶ್ರೀ ಸೀತಾರಾಮ್ ಹೆಚ್., ಅಧ್ಯಕ್ಷರು, ಶ್ರೀ ಗುರು ಚಾರಿಟಬಲ್ ಟ್ರಸ್ಟ್ (ಆರ್.), ಮಂಗಳೂರು

ಕಾರ್ಯಕ್ರಮದ ಹೆಮ್ಮೆಯ ಮುಖ್ಯಾಂಶವೆAದರೆ, ಕೆಡೆಟ್ ಲಿಶಾ. ಡಿ.ಸುವರ್ಣ ಅವರ ಅತ್ಯುತ್ತಮ ರಾಷ್ಟ್ರೀಯ ಸಾಧನೆಗಳಿಗಾಗಿ ಅವರನ್ನು ಸನ್ಮಾನಿಸಲಾಯಿತು. ಗಣರಾಜ್ಯೋತ್ಸವ ಶಿಬಿರವನ್ನು (ಖಆಅ) ಯಶಸ್ವಿಯಾಗಿ ಪೂರ್ಣಗೊಳಿಸಿದ ದೇಶದ ಅಗ್ರ ಐದು ಕೆಡೆಟ್ಗಳಲ್ಲಿ ಅವರು ಒಬ್ಬರಾಗಿದ್ದರು. ಕರ್ನಾಟಕ-ಗೋವಾ ನಿರ್ದೇಶನಾಲಯದಿಂದ ‘ಅತ್ಯುತ್ತಮ ಕೆಡೆಟ್ ನೌಕಾಪಡೆ (ಸೀನಿಯರ್ ವಿಂಗ್)’ ಎಂಬ ವಿಶಿಷ್ಟ ಬಿರುದನ್ನು ಗಳಿಸಿರುವರು. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಪ್ರತಿಷ್ಠಿತ ಅಖಿಲ ಭಾರತ ‘ಅತ್ಯುತ್ತಮ ಧ್ವಜ ಪ್ರದೇಶ ಬ್ರೀಫರ್’ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಅವರು ಮತ್ತಷ್ಟು ಸ್ವರ್ಣ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವರು.
ಅವರ ಸಾಧನೆಗಳು ಅಲ್ಲಿ ಹಾಜರಿದ್ದ ವಿದ್ಯಾರ್ಥಿಗಳಿಗೆ ಒಂದು ಸ್ಫೂರ್ತಿಯ ಮೂಲವಾಗಿ ನಿದರ್ಶನವಾದವು. ಸಮರ್ಪಣಾ ಭಾವದಿಂದ ಮತ್ತು ಶಿಸ್ತಿನಿಂದ ಸಾಧಿಸಬಹುದಾದ ಎತ್ತರವನ್ನು ಪ್ರತಿಬಿಂಬಿಸಿತು.
ಸಮಾರAಭದಲ್ಲಿ ಒಟ್ಟು 100 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಗಳನ್ನು ನೀಡಲಾಯಿತು. ಈ ವಿದ್ಯಾರ್ಥಿವೇತನಗಳು ಹಣಕಾಸಿನ ನೆರವಿಗಿಂತ ಹೆಚ್ಚಿನದಾಗಿದ್ದು, ಅವು ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯದಲ್ಲಿ ಭರವಸೆ, ಪ್ರೋತ್ಸಾಹ ಮತ್ತು ನಂಬಿಕೆಯನ್ನು ದೃಢಿಕರಿಸುತ್ತವೆ. ಅನೇಕ ಕುಟುಂಬಗಳಿಗೆ, ಈ ಬೆಂಬಲವು ನಿರ್ಣಾಯಕ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ. ಆರ್ಥಿಕ ಹೊರೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿರಂತರ ಶಿಕ್ಷಣವನ್ನು ಸಕ್ರಿಯಗೊಳಿಸುತ್ತದೆ.
ವಿದ್ಯಾರ್ಥಿಗಳು ತಮ್ಮ ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿವೇತನವನ್ನು ಪಡೆದರು. ಈ ಸುಸಂದರ್ಭವು ಹೆಮ್ಮೆ ಮತ್ತು ಕೃತಜ್ಞತೆಯ ಭಾವನೆಯಿಂದ ತುಂಬಿಕೊAಡಿತ್ತು. ಬಿಲ್ಲವಾಸ್ ಕತಾರ್, ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ನಡುವಿನ ಸಹಯೋಗವು, ಸಾಮಾಜಿಕ ಕಲ್ಯಾಣಕ್ಕೆ ಬಲವಾದ ಮತ್ತು ಏಕೀಕೃತ ಬದ್ಧತೆಯನ್ನು ಎತ್ತಿ ತೋರಿಸಿತು. ಶಿಕ್ಷಣದಲ್ಲಿ ಹೂಡಿಕೆ ಮಾಡುವ ಮೂಲಕ ಮತ್ತು ಯುವಕರು ಜವಾಬ್ದಾರಿಯುತ ಮತ್ತು ಯಶಸ್ವಿ ವ್ಯಕ್ತಿಗಳಾಗಲು ಅಧಿಕಾರ ನೀಡುವ ಮೂಲಕ ಸಮುದಾಯಗಳನ್ನು ಉನ್ನತೀಕರಿಸುವ ವಿಶಾಲ ಧ್ಯೇಯವನ್ನು ಈ ಕಾರ್ಯಕ್ರಮವು ಪ್ರತಿಬಿಂಬಿಸಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಭಾಷಣಕಾರರು, ವಿದ್ಯಾರ್ಥಿಗಳು ಒದಗಿಸಲಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು, ತಮ್ಮ ಗುರಿಗಳ ಮೇಲೆ ಗಮನಹರಿಸಲು ಮತ್ತು ಶ್ರೇಷ್ಠತೆಗಾಗಿ ಶ್ರಮಿಸಲು ಪ್ರೋತ್ಸಾಹಿಸಿದರು. ಸಾಮೂಹಿಕ ಕೊಡುಗೆಗಳು, ಶಾಶ್ವತ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಒತ್ತಿ ಹೇಳಿ, ಶೈಕ್ಷಣಿಕ ಸಹಾಯಧನ ಬೆಂಬಲಿಸುವುದನ್ನು ಮುಂದುವರಿಸಲು ಅವರು ಸಮಾಜಕ್ಕೆ ಕರೆ ನೀಡಿದರು.
ಕಾರ್ಯಕ್ರಮವು ಹೃದಯಸ್ಪರ್ಶಿ ಭಾಷಣದೊಂದಿಗೆ ಮುಕ್ತಾಯವಾಯಿತು, ಸಮುದಾಯಗಳು ಉಪಕಾರದ ದೃಷ್ಟಿಕೋನದೊಂದಿಗೆ ಒಟ್ಟುಗೂಡಿದಾಗ, ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸಬಹುದು ಎಂಬ ಬಲವಾದ ಸಂದೇಶವನ್ನು ಬಿಟ್ಟುಹೋಯಿತು. ವಿದ್ಯಾರ್ಥಿಗಳ ನಗು, ಅವರ ಕುಟುಂಬಗಳ ಹೆಮ್ಮೆ ಮತ್ತು ಗಣ್ಯರಿಂದ ಪ್ರೋತ್ಸಾಹವು ಹಾಜರಿದ್ದ ಎಲ್ಲರಿಗೂ ಸ್ಮರಣೀಯ ಮತ್ತು ಸ್ಪೂರ್ತಿದಾಯಕ ಅನುಭವವನ್ನು ನೀಡಿತು.

More Stories
ಕರ್ನಾಟಕ ಸಂಘ ಕತಾರ್ಗೆ ನೂತನ ಆಡಳಿತ ಸಮಿತಿ ಆಯ್ಕೆ2026-2028 ಅವಧಿಗೆ 15ನೇ ಅಧ್ಯಕ್ಷರಾಗಿ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ
ಕರ್ನಾಟಕ ಸಂಘ ಕತಾರ್ ವತಿಯಿಂದ ತಾಯಂದಿರ ದಿನಾಚರಣೆ 2026 ಆಚರಣೆ
ಕತಾರ್ನಲ್ಲಿ ಭಾರತೀಯ ಸಮುದಾಯ ಸೇವೆಗೆ ಸುಬ್ರಹ್ಮಣ್ಯ ಹೆಬ್ಬಾಗಿಲುಗೆ ವಿಶೇಷ ಸನ್ಮಾನ