May 23, 2026

ವೃದ್ದಾಶ್ರಮದಲ್ಲಿ ಸರಳವಾಗಿ ರಾಜು ಕಾಗೆ ಜನ್ಮದಿನ ಆಚರಣೆ

ಕಾಗವಾಡ : ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ಚಮಕೇರಿ ಗ್ರಾಮದ ಸುಕನ್ಯಾ ವೃದ್ದಾಶ್ರಮದಲ್ಲಿ ಕಾಗವಾಡ ಮತಕ್ಷೇತ್ರದ ಶಾಸಕರು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ರಾಜ್ಯ ಸರ್ಕಾರದ ವಾಯುವ್ಯ ರಸ್ತೆ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷರಾದ ರಾಜು ಕಾಗೆ ಅವರ 68ನೇ ಹುಟ್ಟುಹಬ್ಬವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಪತ್ರಿಕಾ ಮಾಧ್ಯಮ ಬಡವರ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷರು ಹಾಗೂ ಶ್ರೀ ಸ್ವಾಮಿ ವಿವೇಕಾನಂದ ಶಿಕ್ಷಣ ಜ್ಞಾನ ವಿಕಾಸ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ ನಾಯಿಕ ಅವರು ವೃದ್ದಾಶ್ರಮದ ನಿವಾಸಿಗಳಿಗೆ ಹಣ್ಣು ವಿತರಿಸಿ ಮಾತನಾಡಿದರು. ಈ ವೇಳೆ ಅವರು, ನೇರ ನುಡಿ, ದಿಟ್ಟ ನಿರ್ಧಾರ ಮತ್ತು ನಿರಂತರವಾಗಿ ಕಾಗವಾಡ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಜು ಕಾಗೆ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವ ಧೀಮಂತ ನಾಯಕರು. ಇಂತಹ ನಾಯಕರು ವೃದ್ದಾಶ್ರಮಗಳಿಗೆ ಭೇಟಿ ನೀಡಿ ಸಹಾಯ ಸಹಕಾರ ನೀಡುವುದು ಶ್ಲಾಘನೀಯ ಎಂದು ಹೇಳಿದರು.

ನಂತರ ವೃದ್ದಾಶ್ರಮದ ಹಿರಿಯ ನಾಗರಿಕರಿಗೆ ಹಣ್ಣು ವಿತರಿಸಿ ರಾಜು ಕಾಗೆ ಅವರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸುಕನ್ಯಾ ವೃದ್ದಾಶ್ರಮದ ಸಂಸ್ಥಾಪಕ ಅಧ್ಯಕ್ಷ ಮಹಾದೇವ ಬಿರಾದಾರ, ಪತ್ರಿಕಾ ಮಾಧ್ಯಮ ಬಡವರ ಸೇವಾ ಸಂಸ್ಥೆಯ ರಾಜ್ಯ ಗೌರವಾಧ್ಯಕ್ಷ ಶರಣಪ್ಪಾ ಶಿಂದೆ, ರಾಜ್ಯ ಉಪಾಧ್ಯಕ್ಷ ಅನೀಲ ಭಾಮನೆ, ರಾಜ್ಯ ಮಾಧ್ಯಮ ಘಟಕದ ಅಧ್ಯಕ್ಷ ಎಂ. ಶರ್ಮಾ, ಶಿವಾನಂದ ನಾವಿ ಹಾಗೂ ಪ್ರಶಾಂತ ಶಿಂದೆ ಉಪಸ್ಥಿತರಿದ್ದರು.

ವರದಿ : ಮಹೇಶ್ ಶರ್ಮಾ

About The Author

error: Content is protected !!