September 8, 2026

ಮೊದಲ ಅಕ್ಷರ ಪಾಠ ಕಲಿಸಿದ ಶಿಕ್ಷಕಿಗೆ ಗೌರವಾರ್ಪಣೆ: ಶುಭದರಾವ್ ಅವರಿಂದ ಗುರುಭಕ್ತಿ

ಕಾರ್ಕಳ: ಪುಲ್ಕೇರಿ ರಾಮಪ್ಪ ಶಾಲೆಯಲ್ಲಿ ತಮಗೆ ಒಂದನೇ ತರಗತಿಯಲ್ಲಿ ಮೊದಲ ಅಕ್ಷರ ಅಭ್ಯಾಸ ಮಾಡಿಸಿದ ಪ್ರೀತಿಯ ಶಿಕ್ಷಕಿ ಮನೋರಮಾ ಟೀಚರ್ ಅವರ ಮನೆಗೆ ತೆರಳಿ ಸನ್ಮಾನಿಸುವ ಮೂಲಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅವರು ತಮ್ಮ ಗುರುಭಕ್ತಿಯನ್ನು ಮೆರೆದಿದ್ದಾರೆ.

ಭಾವನಾತ್ಮಕ ಕ್ಷಣ: ಶುಭದರಾವ್ ಅವರು ಶಿಕ್ಷಕಿಗೆ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ಹಾಗೂ ಉಡುಗೊರೆ ನೀಡಿ ಆತ್ಮೀಯವಾಗಿ ಗೌರವಿಸಿದರು. ಬಾಲ್ಯದಲ್ಲಿ ಕಲಿಸಿದ್ದ ಅದೇ ಮೊದಲ ಅಕ್ಷರವನ್ನು ಮತ್ತೊಮ್ಮೆ ಶಿಕ್ಷಕಿಯಿಂದ ಬರೆಸಿಕೊಂಡ ಕ್ಷಣ ಅತ್ಯಂತ ಭಾವುಕವಾಗಿತ್ತು.

ಶಿಕ್ಷಕಿಯ ಆತಿಥ್ಯ: ವರ್ಷಗಳ ನಂತರ ಮನೆಗೆ ಆಗಮಿಸಿದ ತಮ್ಮ ಹಳೆಯ ವಿದ್ಯಾರ್ಥಿಯನ್ನು ಪ್ರೀತಿಯಿಂದ ಸ್ವಾಗತಿಸಿದ ಮನೋರಮಾ ಟೀಚರ್, ಸ್ವತಃ ಚಹಾ ತಯಾರಿಸಿ ಉಪಚರಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ಬಾಲ್ಯದಲ್ಲಿ ಅಕ್ಷರ ಕಲಿಸಿದ ಗುರುವನ್ನು ಮರೆಯದೆ ಗೌರವಿಸಿದ ಈ ಘಟನೆಯು ಗುರು-ಶಿಷ್ಯರ ಅಪರೂಪ ಹಾಗೂ ಅಮರ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

    About The Author

    error: Content is protected !!