April 30, 2026

ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭವ್ಯ 5 ದಿನಗಳ ಉತ್ಸವ ಸಂಭ್ರಮ

ಕಾರ್ಕಳ ಸುದ್ದಿ
ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಐದು ದಿನಗಳ ಭವ್ಯ ಉತ್ಸವ ಈ ಬಾರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಪಡುತಿರುಪತಿ ಖ್ಯಾತಿಗೆ ಪಾತ್ರವಾಗಿರುವ ಈ ದೇವಸ್ಥಾನದಲ್ಲಿ ನಡೆದ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಮನಸೆಳೆಯುವಂತೆ ಜರುಗಿದವು.


ಉತ್ಸವದ ಅಂಗವಾಗಿ ಬಲಿ, ಕಟ್ಟೆ ಪೂಜೆ, ಮೃಗಬೇಟೆ ಉತ್ಸವ, ಮಹಾ ರಥೋತ್ಸವ ಹಾಗೂ ಅವಭೃತ ಓಕುಳಿ ಉತ್ಸವಗಳು ಭಕ್ತಿಭಾವದಿಂದ ನಡೆದವು. ಈ ಸಂದರ್ಭದಲ್ಲಿ ಜಿ.ಎಸ್.ಬಿ ಬಂಧುಗಳು ಸೇರಿದಂತೆ ಊರ-ಪರ ಊರಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದರು.


ಐದು ದಿನಗಳ ಕಾಲ ನಿರಂತರ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು. ಉತ್ಸವದ ಸಂಪೂರ್ಣ ಅವಧಿಯಲ್ಲಿ ದೇವಸ್ಥಾನ ಪರಿಸರದಲ್ಲಿ ಭಕ್ತಿಭಾವ ಮತ್ತು ಹಬ್ಬದ ಸಂಭ್ರಮ ಆವರಿಸಿತ್ತು.
ವರದಿ: ಅರುಣ್ ಭಟ್, ಕಾರ್ಕಳ

About The Author

error: Content is protected !!