May 13, 2026

7ಕ್ಕೆ ಸ್ವರ ಲಯ ಸಂಗೀತ ಭೈಠಕ್


ಶಿರಸಿ: ನಗರದ ನೆಮ್ಮದಿ ಕುಟೀರದಲ್ಲಿ ಸ್ವರ ಲಯ ಸಂಗೀತ ಭೈಠಕ್ ಮೇ.೭ರಂದು ಸಂಜೆ ೫.೩೦ರಿಂದ ಏರ್ಪಡಿಸಲಾಗಿದೆ.


ಈ ಕಾರ್ಯಕ್ರಮದಲ್ಲಿ ಗೌತಮ್ ಹೆಗಡೆ ಮತ್ತು ವಿಜೇತಾ ಹೆಗಡೆ ಇವರ ಗಾಯನ ಹಾಗೂ ರಾಮಕೃಷ್ಣ ಹೆಗಡೆ ಅವರು ಸಿತಾರ್ ಕಾರ್ಯಕ್ರಮ ನೀಡುವರು. ಇವರಿಗೆ ಸಹಕಲಾವಿದರಾಗಿ ರಾಮದಾಸ್ ಭಟ್, ಸಂದೇಶ ಹೆಗಡೆ ಹಾಗೂ ರಚಿತ್ ಹೆಗಡೆ, ತಬಲ ಸಹಕಾರ ನೀಡುವರು ಹಾಗೂ ಪ್ರಜ್ವಲ್ ಹೆಗಡೆ, ಉನ್ನತಿ ಕಾಮತ್ ಸಂವಾದಿನಿಯಲ್ಲಿ ಸಹಕರಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

About The Author

error: Content is protected !!