ಭಟ್ಕಳ: ತಾಲೂಕಿನ ಬಿಳಲಖಂಡ ಗ್ರಾಮದ ಸಾಗರ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗ್ರಾಮದ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಪ್ರಮುಖ ಎರಡು ಸ್ಥಳಗಳಲ್ಲಿ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ಇಡಲಾಗಿದೆ.


ಸಿಸಿಟಿವಿ ಅಳವಡಿಕೆಗೆ ಕಾರಣವೇನು?
ಬಿಳಲಖಂಡ ಹಾಗೂ ಪಟ್ಟಣದ ಕೆಲವರು ಗೃಹಬಳಕೆಯ ತ್ಯಾಜ್ಯ ಮತ್ತು ಹಳೆಯ ವಸ್ತುಗಳನ್ನು ಸಾಗರ ರಸ್ತೆಯ ಬದಿಯಲ್ಲೇ ಎಸೆದು ಹೋಗುತ್ತಿದ್ದರು. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯಿತಿಗೆ ನಿರಂತರ ದೂರು ನೀಡಿದ್ದರು.
ಪಂಚಾಯಿತಿ ಹಾಗೂ ಸ್ಥಳೀಯರು ಹಲವು ಬಾರಿ ಸ್ವಚ್ಛತಾ ಕಾರ್ಯ ನಡೆಸಿ, ಕಸ ಎಸೆಯದಂತೆ ಮನವಿ ಮಾಡಿದರೂ ಕೆಲವರ ನಿರ್ಲಕ್ಷ್ಯ ಮುಂದುವರಿದಿತ್ತು. ಸಮೀಪದಲ್ಲೇ ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕವಿದ್ದರೂ ರಸ್ತೆ ಬದಿಯಲ್ಲೇ ಕಸ ಸುರಿಯುತ್ತಿದ್ದುದನ್ನು ಗಂಭೀರವಾಗಿ ಪರಿಗಣಿಸಿ, ಪ್ರಭಾರ ಪಿಡಿಒ ಚಂದ್ರಶೇಖರ ಇಟಗಿ ಅವರ ನೇತೃತ್ವದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಪಿಡಿಒ ಚಂದ್ರಶೇಖರ ಇಟಗಿ ಅವರ ಎಚ್ಚರಿಕೆ:
“ಸಾಗರ ರಸ್ತೆ ಭಾಗದಲ್ಲಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕಲು ಸಿಸಿಟಿವಿ ಅಳವಡಿಸಲಾಗಿದೆ. ಕ್ಯಾಮೆರಾ ಅಳವಡಿಸಿದ ನಂತರ ಕಸ ಎಸೆಯುವುದು ಕೊಂಚ ಕಡಿಮೆಯಾಗಿದೆ. ಆದರೂ ದೃಶ್ಯಾವಳಿಗಳನ್ನು ನಿರಂತರವಾಗಿ ಪರಿಶೀಲಿಸಲಾಗುವುದು.
ನಿಯಮ ಉಲ್ಲಂಘಿಸಿ ಕಸ ಎಸೆಯುವುದು ಕಂಡುಬಂದರೆ ಮೊದಲ ಹಂತದಲ್ಲಿ ದಂಡ ವಿಧಿಸಲಾಗುವುದು. ತಪ್ಪನ್ನು ಮರುಕಳಿಸಿದರೆ ಘನತ್ಯಾಜ್ಯ ನಿರ್ವಹಣಾ ನಿಯಮಗಳಡಿ ಪ್ರಕರಣ (Case) ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.”


More Stories
ಮಾರುಕೇರಿ ಹೂತ್ಕಳದ ಧನ್ವಂತರಿ ದೇವಾಲಯದಲ್ಲಿ ಜುಲೈ 25 ರಂದು ‘ಲಕ್ಷ ತುಳಸಿ ಅರ್ಚನೆ’ ಹಾಗೂ ‘ಸ್ವರ್ಣ ಪಾದುಕಾ ಭಿಕ್ಷೆ’
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ‘ಕೃಷ್ಣ ಯಜುರ್ವೇದ ಸ್ವಾಹಾಕಾರ’ ಧಾರ್ಮಿಕ ಮಹೋತ್ಸವ ಸಂಪನ್ನ
ಸಾಧಕ ಭಟ್ಕಳ ತಾಲೂಕು ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಆಟೋ ಚಾಲಕರ-ಮಾಲಕರ ಸಂಘದಿಂದ ಸನ್ಮಾನ