July 26, 2026

ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ: ಪ್ರತಿಭಾವಂತರಿಗೆ ಪುರಸ್ಕಾರ, ಸಾಧಕರಿಗೆ ಸನ್ಮಾನ

ಭಟ್ಕಳ: ತಾಲೂಕು ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವು ಬಸ್ತಿಮಕ್ಕಿಯ ಹವ್ಯಕ ಸಭಾಭವನದಲ್ಲಿ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಪಾದ ಭಟ್ಟ ಕಡತೋಕ (ಗಾಯನ), ಜಿ.ಎಸ್. ಹೆಗಡೆ (ಅರ್ಥಧಾರಿ), ಶೇಷಾದ್ರಿ ಅಯ್ಯಂಗಾರ್ (ತಬಲಾ) ಹಾಗೂ ಗಣಪತಿ ಶಿರೂರು (ತಾಳ) ಅವರ ‘ಗೀತ ರಾಮಾಯಣ’ ಕಾರ್ಯಕ್ರಮವು ಸಭಿಕರ ಗಮನ ಸೆಳೆಯಿತು.

ವೇ.ಮೂ. ಕೃಷ್ಣಾನಂದ ಭಟ್ ಬಲ್ಸೆ (ಉದ್ಘಾಟಕರು): “ಮಾನವ ಜನ್ಮ ಅತ್ಯಂತ ಶ್ರೇಷ್ಠವಾಗಿದ್ದು, ಸಮಾಜಮುಖಿಯಾಗಿ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಸತ್ಕಾರ್ಯಗಳಲ್ಲಿ ನಿರತರಾಗಿ, ಕಷ್ಟದಲ್ಲಿದ್ದವರಿಗೆ ನೆರವಾಗಬೇಕು. ಪ್ರತಿಭಾವಂತ ವಿದ್ಯಾರ್ಥಿಗಳು ಎಲ್ಲೇ ಬೆಳೆದರೂ ಹುಟ್ಟೂರಿಗೆ ತಮ್ಮದೇ ಆದ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಎಂ.ವಿ. ಹೆಗಡೆ (ಸಂಘದ ಅಧ್ಯಕ್ಷರು): “ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗವನ್ನು ಅರಸುವವರಾಗದೇ, ಇತರರಿಗೆ ಉದ್ಯೋಗ ನೀಡುವ ಉದ್ಯೋಗ ಸೃಷ್ಟಿಕರ್ತರಾಗುವತ್ತ ಗುರಿ ಹೊಂದಬೇಕು ಎಂದರು.

ಶಿವಾನಂದ ಹೆಗಡೆ ಕೆರೆಮನೆ (ಜೀವಮಾನ ಸಾಧನೆ ಸನ್ಮಾನಿತರು): “ಹವ್ಯಕ ಸಂಪ್ರದಾಯ ಮತ್ತು ಭಾರತೀಯ ಶ್ರೇಷ್ಠ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಹೊಣೆ ಎಲ್ಲರ ಮೇಲಿದೆ. ದೇಶ-ವಿದೇಶಗಳಲ್ಲೂ ಹವ್ಯಕ ಸಂಘಟನೆಗಳು ಬೆಳೆಯುತ್ತಿರುವುದು ಸಂತಸದ ವಿಷಯ ಎಂದರು.

ಅಶೋಕ ಭಟ್ಟ (ಬ್ರಹ್ಮಾವರ ತಹಸೀಲ್ದಾರ್): “ಸಂಘಟನೆ ಮತ್ತು ಸಮಾಜ ಒಂದೇ ನಾಣ್ಯದ ಎರಡು ಮುಖಗಳು. ನಿರಂತರ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ.”ಎಂದರು.

ಡಾ. ಜಿ.ಎಸ್. ಹೆಗಡೆ (ನಿವೃತ್ತ ಪ್ರಾಚಾರ್ಯರು): “ಹವ್ಯಕರ ಇತಿಹಾಸಕ್ಕೆ ಸುಮಾರು 2,000 ವರ್ಷಗಳ ಸುದೀರ್ಘ ದಾಖಲೆಗಳಿವೆ. ಒಗ್ಗಟ್ಟು ಮತ್ತು ಸಂಘಟನೆಯೇ ಹವ್ಯಕರ ಬಲ.ಎಂದರು.

ಡಿ.ಜಿ. ಹೆಗಡೆ (ನಿವೃತ್ತ ತಹಸೀಲ್ದಾರ್): “ಸಂಘವು ಪ್ರತಿಭಾ ಪುರಸ್ಕಾರದ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಆಸರೆಯಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಹಾಗೂ ಪಿಯುಸಿಯಲ್ಲಿ (PUC) ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಶಂಭು ಹೆಗಡೆ, ಪ್ರಾಂಶುಪಾಲ ಜಿ.ಎಸ್. ಹೆಗಡೆ, ರಾಧಾಕೃಷ್ಣ ಭಟ್ಟ, ಜಿ.ಟಿ. ಹೆಗಡೆ ಹಾಗೂ ಸುಧಾ ಭಟ್ಟ ಉಪಸ್ಥಿತರಿದ್ದರು. ನ್ಯೂ ಇಂಗ್ಲಿಷ್ ಶಾಲೆಯ ಮುಖ್ಯಾಧ್ಯಾಪಕ ಗಣಪತಿ ಶಿರೂರು ಸ್ವಾಗತಿಸಿದರು, ವಿದ್ಯಾ ಭಟ್ಟ ಪ್ರಾರ್ಥಿಸಿದರು. ಐ.ವಿ. ಹೆಗಡೆ ಹಾಗೂ ಕೆ.ಬಿ. ಹೆಗಡೆ ನಿರೂಪಿಸಿದರೆ, ಗಣೇಶ ಯಾಜಿ ಅತಿಥಿ ಪರಿಚಯ ಮಾಡಿದರು. ಜಿ.ವಿ. ಯಾಜಿ ವಂದನಾರ್ಪಣೆ ಸಲ್ಲಿಸಿದರು.

About The Author

error: Content is protected !!