September 20, 2026

ಕರ್ನಾಟಕ ಸಂಘ ಕತಾರ್‌ನಿಂದ ಉಪ ರಾಯಭಾರ ಮುಖ್ಯಸ್ಥ ಶ್ರೀ ಸಂದೀಪ್ ಕುಮಾರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ

ದೋಹಾ (ಕತಾರ್): ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರ ಮುಖ್ಯಸ್ಥ (DCM) ಶ್ರೀ ಸಂದೀಪ್ ಕುಮಾರ್ ಅವರಿಗೆ ಕರ್ನಾಟಕ ಸಂಘ ಕತಾರ್ (KSQ) ನಿಯೋಗವು ದೋಹಾದಲ್ಲಿರುವ ರಾಯಭಾರ ಕಚೇರಿಯಲ್ಲಿ ಭಾವಪೂರ್ಣ ಬೀಳ್ಕೊಡುಗೆ ಸಲ್ಲಿಸಿತು.

ಸೇವೆಯ ಸ್ಮರಣೆ ಹಾಗೂ ಕೃತಜ್ಞತೆ: ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ನೇತೃತ್ವದ ನಿಯೋಗವು ಶ್ರೀ ಸಂದೀಪ್ ಕುಮಾರ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನೀಡಿದ ಮಾರ್ಗದರ್ಶನ, ಪ್ರೋತ್ಸಾಹ ಹಾಗೂ ಕನ್ನಡಿಗ ಸಮುದಾಯದ ಕಾರ್ಯಕ್ರಮಗಳಿಗೆ ನೀಡಿದ ಬೆಂಬಲವನ್ನು ಮುಕ್ತಕಂಠದಿಂದ ಸ್ಮರಿಸಿತು.

ಸಂಘದ ಕಾರ್ಯಕ್ಕೆ ಶ್ಲಾಘನೆ: ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಸಂದೀಪ್ ಕುಮಾರ್ ಅವರು, ಕತಾರ್‌ನಲ್ಲಿ ಭಾರತೀಯ ಕಲೆ, ಸಂಸ್ಕೃತಿ ಮತ್ತು ಸಮಾಜ ಕಲ್ಯಾಣ ಚಟುವಟಿಕೆಗಳ ಉತ್ತೇಜನಕ್ಕೆ ಕೆಎಸ್‌ಕ್ಯೂ ಮಾಡುತ್ತಿರುವ ಸಮರ್ಪಿತ ಸೇವೆಯನ್ನು ಶ್ಲಾಘಿಸಿ, ಶುಭ ಹಾರೈಸಿದರು.

ಸಾಂಪ್ರದಾಯಿಕ ಸನ್ಮಾನ: ಗೌರವದ ಸಂಕೇತವಾಗಿ ಕೆಎಸ್‌ಕ್ಯೂ ನಾಯಕತ್ವವು ಅವರಿಗೆ ಮೈಸೂರು ಪೇಟ ತೊಡಿಸಿ, ಸಾಂಪ್ರದಾಯಿಕ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿತು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅನಿಲ್ ಭಾಸಗಿ, ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ, ಸಲಹೆಗಾರರಾದ ವೀರೇಶ್ ಮಣ್ಣಂಗಿ, ಸಂದೀಪ್ ರೆಡ್ಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    About The Author

    error: Content is protected !!