ಭಟ್ಕಳ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಜಗದೀಶ (ತಂದೆ ದೇವರಾಯ ಗೊಂಡ), ಹೊಸಗದ್ದೆ ಹಡಿಲ್ ಅಬ್ಬತಿ ಮತ್ತು ಜಗದೀಶ ನಾಯ್ಕ, ಭಟ್ಕಳ ಎಂಬವರು ಪರಸ್ಪರ ಸಹಯೋಗದಲ್ಲಿ ಛಾಯಾ ಲಾಡ್ಜ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಂತು, ಓ.ಸಿ ಮಟಕಾ ಅಂಕೆ ಸಂಖ್ಯೆಗಳ ಆಧಾರದ ಮೇಲೆ ಜನರಿಂದ ಹಣವನ್ನು ಪಡೆದು ಲಾಭಕ್ಕಾಗಿ ಪಂಥವನ್ನಾಗಿ ಕಟ್ಟಿಕೊಂಡು ಜೂಗಾರಾಟ ನಡೆಸುತ್ತಿದ್ದರು.
ನಗರ ಠಾಣೆಯ ಪಿಎಸ್ಐ ನವಿನ್ ನಾಯ್ಕ ಹಾಗೂ ತಂಡ ದಾಳಿ ನಡೆಸಿದ್ದು, ಆರೋಪಿಗಳ ವಶದಿಂದ ರೂ 8,420 ನಗದು ಹಾಗೂ ಓ.ಸಿ ಜೂಗಾರಾಟದ ಉಪಕರಣಗಳು ವಶಪಡಿಸಲಾಗಿದೆ. ಆರೋಪಿಗಳಲ್ಲಿ ಆರೋಪಿ 1 ಸ್ಥಳದಲ್ಲೇ ಬಂಧಿಸಲಾಗಿದೆ, ಇವರುಗಳ ಮೇಲೂ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


More Stories
ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 100 ಕ್ಕೆ 100 ಫಲಿತಾಂಶ; ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
ವಿದೇಶಿ ಉದ್ಯೋಗದ ಆಮಿಷ ಒಡ್ಡಿ ಯುವಕನಿಗೆ ₹2.49 ಲಕ್ಷ ವಂಚನೆ: ಮೂವರ ವಿರುದ್ಧ ಪ್ರಕರಣ ದಾಖಲು!
ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ; ತುರ್ತು ಸುರಕ್ಷತಾ ಕ್ರಮಕ್ಕೆ ಖಡಕ್ ಸೂಚನೆ