August 24, 2026

14 ವರ್ಷದ ಬಾಲಕ ಗೌತಮ್‌ ಚಿಕಿತ್ಸೆಗೆ ನೆರವಿನ ಹಸ್ತ ಚಾಚಿ: ಆರ್ಥಿಕ ನೆರವಿಗೆ ಕುಟುಂಬದ ಮನವಿ

ಹೊನ್ನಾವರ:  ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಮೂಲದ 14 ವರ್ಷದ ಬಾಲಕ ಗೌತಮ್ ಸುಬ್ರಹ್ಮಣ್ಯ ಗೌಡ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಆತನ ಕುಟುಂಬ ದಯನೀಯವಾಗಿ ಮನವಿ ಮಾಡಿಕೊಂಡಿದೆ.

ಗೌತಮ್ ಹುಟ್ಟಿನಿಂದಲೇ ತೀವ್ರ ಬೆನ್ನುಮೂಳೆ ಮತ್ತು ಕಾಲು ಮೂಳೆ ವಿಕೃತಿ (Scoliosis) ಸಮಸ್ಯೆಯಿಂದ ಬಳಲುತ್ತಿದ್ದಾನೆ. ದಿನದಿಂದ ದಿನಕ್ಕೆ ಆತನಿಗೆ ನಡೆಯುವುದು ಅತ್ಯಂತ ಕಷ್ಟಕರವಾಗುತ್ತಿದೆ.
ಈಗಾಗಲೇ ಜೂನ್ 2026ರಲ್ಲಿ ಬೆಂಗಳೂರಿನ ಕಾಡೆ ಆಸ್ಪತ್ರೆಯಲ್ಲಿ ಆತನಿಗೆ ದೊಡ್ಡ ಬೆನ್ನುಮೂಳೆ ಶಸ್ತ್ರಚಿಕಿತ್ಸೆ (T5-S1 Spinal Fusion) ಮಾಡಲಾಗಿದೆ. ಇದಕ್ಕೂ ಮುನ್ನ ಎಡಗಾಲಿನ ಶಸ್ತ್ರಚಿಕಿತ್ಸೆಯೂ ನಡೆದಿದೆ.

ನೆರವಿನ ಅಗತ್ಯವಿದೆ:

ಮಗುವಿಗೆ ಇನ್ನು ಮುಂದಿನ ತಪಾಸಣೆ, ಫಿಸಿಯೋಥೆರಪಿ, ಔಷಧ ಹಾಗೂ ಕಾಲಿನ ಮುಂದಿನ ಚಿಕಿತ್ಸೆಯ ಅಗತ್ಯವಿದೆ. ಈ ಚಿಕಿತ್ಸೆಗೆ ಸುಮಾರು ₹5,00,000 ದಿಂದ ₹6,00,000 ಗಳಷ್ಟು ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಬಡ ಕುಟುಂಬವಾದ್ದರಿಂದ ಈ ಬೃಹತ್ ವೆಚ್ಚವನ್ನು ಭರಿಸಲು ಆರ್ಥಿಕ ಪರಿಸ್ಥಿತಿ ಸಹಕರಿಸುತ್ತಿಲ್ಲ. ನೋವಿಲ್ಲದೆ ಶಾಲೆಗೆ ನಡೆದು ಹೋಗಬೇಕೆಂಬುದು ಗೌತಮ್‌ನ ಆಸೆಯಾಗಿದ್ದು, ದಯವಿಟ್ಟು ಸಾರ್ವಜನಿಕರು ಹಾಗೂ ದಾನಿಗಳು ನಿಮ್ಮ ಕೈಲಾದ ಸಹಾಯ ಮಾಡಿ ಮಗುವಿನ ಭವಿಷ್ಯಕ್ಕೆ ಆಸರೆಯಾಗಬೇಕಾಗಿ ವಿನಂತಿ.

ಬ್ಯಾಂಕ್ ವಿವರಗಳು (ನೆರವು ನೀಡಲು):

  • ಖಾತೆದಾರರ ಹೆಸರು: Tara Subramanya Gouda
  • ಖಾತೆ ಸಂಖ್ಯೆ (Account No): 43335035230
  • IFSC ಕೋಡ್: SBIN0041033
    (PhonePe/QR ಕೋಡ್ ಮೂಲಕವೂ ನೇರವಾಗಿ ನೆರವು ನೀಡಬಹುದು)

“ಒಂದು ಜೀವಕ್ಕೆ ಆಸರೆಯಾಗುವುದು ಮಾನವೀಯತೆಯ ಮಹತ್ತರ ಸೇವೆಯಾಗಿದೆ.”
ನಿಮ್ಮ ಸಣ್ಣ ಸಹಾಯವೂ ಈ ಮಗುವಿನ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದು.

About The Author

error: Content is protected !!