August 25, 2026

ಸರ್ಕಾರಿ ನೌಕರರ ಮನ್ಸೂನ್ ಟ್ರೋಫಿ: ಎನ್‌ಎಸ್‌ಸಿ ತಂಡಕ್ಕೆ ಚಾಂಪಿಯನ್ ಪಟ್ಟ!

ಭಟ್ಕಳ: ತಾಲೂಕಿನ ಸರ್ಕಾರಿ ನೌಕರರಿಗಾಗಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ಸರ್ಕಾರಿ ನೌಕರರ ಮನ್ಸೂನ್ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯು ಹೊನ್ನೆಗದ್ದೆ ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸರ್ಕಾರಿ ನೌಕರರಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವ ಹಾಗೂ ಪರಸ್ಪರ ಸ್ನೇಹ-ಸೌಹಾರ್ದತೆಯನ್ನು ವೃದ್ಧಿಸುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಒಟ್ಟು ಆರು ತಂಡಗಳು ಭಾಗವಹಿಸಿದ್ದ ಈ ಕೂಟದ ಅಂತಿಮ ಹಣಾಹಣಿಯಲ್ಲಿ ಶ್ರೀ ನಾರಾಯಣ ನಾಯ್ಕ (ಕಾರವಾರ) ಅವರ ಮಾಲೀಕತ್ವದ ನಾರಾಯಣ ಸ್ಪೋರ್ಟ್ಸ್ ಕ್ಲಬ್ (NSC) ಹಾಗೂ ಶ್ರೀ ಧನಂಜಯ ಮೊಗೇರ (ಭಟ್ಕಳ) ಅವರ ಮಾಲೀಕತ್ವದ ಶ್ರೀ ದುರ್ಗಾದೇವಿ ಕ್ರಿಕೆಟರ್ಸ್ (DDC) ತಂಡಗಳು ಮುಖಾಮುಖಿಯಾದವು.

ಎನ್‌ಎಸ್‌ಸಿ ತಂಡಕ್ಕೆ 21 ರನ್‌ಗಳ ಭರ್ಜರಿ ಗೆಲುವು:

ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಎನ್‌ಎಸ್‌ಸಿ ತಂಡವು ನಿಗದಿತ 8 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 77 ರನ್ ಕಲೆಹಾಕಿತು.

78 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಡಿಡಿಸಿ ತಂಡವು ಎನ್‌ಎಸ್‌ಸಿ ತಂಡದ ಬೌಲರ್‌ಗಳ ನಿಯಂತ್ರಿತ ದಾಳಿಗೆ ತತ್ತರಿಸಿ, ಕೇವಲ 56 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ಮೂಲಕ ಎನ್‌ಎಸ್‌ಸಿ (NSC) ತಂಡವು 21 ರನ್‌ಗಳ ಅಂತರದಿಂದ ಪಂದ್ಯ ಗೆದ್ದು ‘ಮನ್ಸೂನ್ ಟ್ರೋಫಿ’ ಚಾಂಪಿಯನ್ ಆಗಿ ಹೊರಹೊಮ್ಮಿತು.

ವೈಯಕ್ತಿಕ ಪ್ರಶಸ್ತಿ ವಿಜೇತರು:

  • ಪಂದ್ಯ ಪುರುಷೋತ್ತಮ (Man of the Match): ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎನ್‌ಎಸ್‌ಸಿ ತಂಡದ ನಾಯಕ ವಿನಾಯಕ್ ಭಟ್ಟ.
  • ಸರಣಿ ಶ್ರೇಷ್ಠ ಬ್ಯಾಟ್ಸ್‌ಮನ್ & ಬೌಲರ್: ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಡಿಡಿಸಿ ತಂಡದ ವಾಸು ಮೊಗೇರ ಅವರು ‘ಉತ್ತಮ ಬ್ಯಾಟ್ಸ್‌ಮನ್’ ಹಾಗೂ ‘ಉತ್ತಮ ಬೌಲರ್’ ಎರಡು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

About The Author

error: Content is protected !!