September 8, 2026

ಎನ್. ರಾಮು ಹಿರೇಗುತ್ತಿಗೆ ಒಲಿದ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್’

ಕುಮಟಾ: ತಾಲೂಕಿನ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ಶಿಕ್ಷಕ ಎನ್. ರಾಮು ಹಿರೇಗುತ್ತಿ ಅವರಿಗೆ 2026ನೇ ಸಾಲಿನ ‘ಭಾರತದ ರಾಷ್ಟ್ರೀಯ ವ್ಯಾಪಾರ ಶ್ರೇಷ್ಠ ಪ್ರಶಸ್ತಿ’ (ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್) ಲಭಿಸಿದೆ.

ಸಾಧನೆ ಹಾಗೂ ಕೊಡುಗೆ: ಶಿಕ್ಷಣ, ಸಮಾಜಸೇವೆ, ಪತ್ರಿಕಾ ಬರಹ, ಯುವ ಸಂಘಟನೆ, ಆರೋಗ್ಯ ಜಾಗೃತಿ ಹಾಗೂ ಕಲೆ-ಸಂಸ್ಕೃತಿ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ನಿರಂತರ ಸೇವೆಗೆ ಈ ಗೌರವ ಸಂದಿದೆ. 2001ರ ಕಾರವಾರ ಕರಾವಳಿ ಸ್ವಚ್ಛತಾ ಅಭಿಯಾನ, ಕರಾವಳಿ ಉತ್ಸವ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಇವರು, ನಾಲ್ಕು ವರ್ಷಗಳ ಕಾಲ ಶ್ರೀ ಬ್ರಹ್ಮ ಜಟಿಕ ಯುವಕ ಸಂಘದ ಅಧ್ಯಕ್ಷರಾಗಿ ಹಾಗೂ ಯಕ್ಷಗಾನ ತರಬೇತಿ ಸಂಘಟಕರಾಗಿ ಕೆಲಸ ಮಾಡಿದ್ದಾರೆ.

ಪೂರ್ವ ಪ್ರಶಸ್ತಿಗಳು: ಇವರ ಬಹುಮುಖ ಸೇವೆಯನ್ನು ಗುರುತಿಸಿ ಈಗಾಗಲೇ ಜಿಲ್ಲಾ ಯುವ ಪ್ರಶಸ್ತಿ-2007, ಕರ್ನಾಟಕ ಸುವರ್ಣ ಶ್ರೀ ಪ್ರಶಸ್ತಿ 2010 ಹಾಗೂ ಶಿಕ್ಷಣ ಸೇವಾ ರತ್ನ ಪ್ರಶಸ್ತಿ-2024 ಸೇರಿದಂತೆ ಹಲವು ಗೌರವಗಳು ಲಭಿಸಿವೆ.

    ಈಗ ಲಭಿಸಿರುವ ‘ಇಂಡಿಯಾ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್-2026’ ಅವರ ಸಾಧನೆಯ ಪಯಣಕ್ಕೆ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.

    About The Author

    error: Content is protected !!