ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಬೆಡದಹಳ್ಳಿಯ ಶ್ರೀ ಪಂಚಭೊತೇಶ್ವರ ದೇವಾಲಯದ ಮಠದಲ್ಲಿ ಮಕ್ಕಳಿಗೆ ವಸತಿ ಸಹಿತ ಸಂಸ್ಕಾರ ಜ್ಞಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು..
ಶಾಸಕ ಹೆಚ್ ಟಿ ಮಂಜು ಕಾರ್ಯಕದಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರದವನ್ನು ಕಲಿಕೆಯಾಗಬೇಕು ಅದೇ ರೀತಿ ಕಳೆದ ಮೂರು ವರ್ಷಗಳಿಂದ ಶ್ರೀ ಪಂಚಭೊತೇಶ್ವರ ಸುಕ್ಷೇತ್ರದಲ್ಲಿ ಪೀಠಾದ್ಯಕ್ಷರದ ಶ್ರೀ ರುದ್ರುಮುನಿ ಸ್ವಾಮೀಜಿ ರವರು ಮಕ್ಕಳಿಗೆ ಸಂಸ್ಕಾರದ ಅರಿವು ಮತ್ತು ಚಿತ್ರಕಲೆ, ಸಂಗೀತಾ, ನೃತ್ಯ ಸೇರಿದಂತೆ ಹತ್ತು ಹಲವು ಕಾರ್ಯಕ್ರಮದೊಂದಿಗೆ ಸುಮಾರು 50 ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಈ ಶಿಭಿರದ ಪ್ರಯೋಜನವನ್ನು ಮಕ್ಕಳು ಪಡೆದುಕೊಳ್ಳುವಂತೆ ತಿಳಿಸಿದ್ರು..
ಶ್ರೀ ಪಂಚಭೊತೇಶ್ವರ ಸುಕ್ಷೇತ್ರ ಪೀಠಾದ್ಯಕ್ಷರಾದ ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ ಪ್ರತಿ ವರ್ಷದಂತೆ ದಾನಿಗಳ ಸಹಾರದೊಂದಿಗೆ ಊಟ ವಸತಿ ಸಹಿತ 10 ದಿನದ ಮಕ್ಕಳಿಗೆ ಸಂಸ್ಕಾರ ಶಿಭಿರ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮಕ್ಕೆ ಧಾನಿಗಳು ಕೈಲಾದ ಸಹಾಯ ಮಾಡುವುದರ ಜೊತೆಗೆ ಮಕ್ಕಳ ಕಲಿಗೆ ಕೈ ಜೋಡಿಸುವಂತೆ ತಿಳಿಸಿದ್ರು..
ಕಾರ್ಯಕ್ರಮದಲ್ಲಿ ಶ್ರೀ ರುದ್ರಮುನಿ ಸ್ವಾಮಿಜಿ, ಶಾಸಕ ಹೆಚ್ ಟಿ ಮಂಜು, ಟಿ ಎ ಪಿ.ಎಂ ಎಸ್ ನಿರ್ದೇಶಕ ದೀಲೀಪ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜೇಗೌಡ, ಬಿ.ಜಿ.ಪಿ ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗಣ್ಣ, ಉದ್ಯಮಿ ಎಂ ಎಸ್ ಸುಬ್ರಹ್ಮಣ್ಯ, ಶಿಕ್ಷಕ ಮಹೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾದ್ಯಕ್ಷ ಸುನೀಲ್, ಶಿಕ್ಷಕ ಪ್ರಕಾಶ್, ಮಠದ ಕಾರ್ಯದರ್ಶಿ ಕಾಂತರಾಜು ಪತ್ರಕರ್ತರಾದ ಶ್ರೀನಿವಾಸ್, ಚಂದ್ರು ಕಾಡುಮೆಣಸ, ಸೇರಿದಂತೆ ಮತ್ತಿತ್ತರರು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ
About The Author


More Stories
ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ಸಮರ್ಪಣೆ, ರಾಕಿ ಕಟ್ಟಿ ಗೌರವಿಸಿದ ಕೆ.ಆರ್.ಪೇಟೆ ಬಿಜೆಪಿ
ಕ್ರೈಸ್ಟ್ ದಿ ಕಿಂಗ್ ಪಿಯು ಕಾಲೇಜಿನಲ್ಲಿ ವಿದ್ಯಾಜ್ಯೋತಿ ಸಮಾರಂಭ: ವಿದ್ಯಾರ್ಥಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ
ಪ್ರತಿ ಶನಿವಾರ ಹೋಬಳಿ ಮಟ್ಟದಲ್ಲಿ ‘ಪ್ರಜಾ ಸೇವಾ ಆಂದೋಲನ’: ಫಲಾನುಭವಿಗಳ ಮನೆ ಬಾಗಿಲಿಗೆ ಸರ್ಕಾರಿ ಸೇವೆ – ತಹಶೀಲ್ದಾರ್ ಶ್ರೇಯಸ್