August 22, 2026

‘ಕಾಪ್ ಆಫ್ ಮಂತ್’ ಪ್ರಶಸ್ತಿಗೆ ಶಂಕರಮೂರ್ತಿ ನಾಯ್ಕ ಆಯ್ಕೆ.

ಸಿದ್ದಾಪುರ: ಅಪ್ರತಿಮ ಕರ್ತವ್ಯ ನಿಷ್ಠೆ, ಜನಸ್ನೇಹಿ ನಿಲುವು ಹಾಗೂ ಸೇವಾನಿಷ್ಠೆಯನ್ನು ಗುರುತಿಸಿ, ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕಾಪ್ ಆಫ್ ಮಂತ್’ (Cop of the Month) ಪ್ರಶಸ್ತಿಗೆ ಬನವಾಸಿ ಪೊಲೀಸ್ ಠಾಣೆಯ ಶಂಕರಮೂರ್ತಿ ನಾಯ್ಕ ಆಯ್ಕೆಯಾಗಿದ್ದಾರೆ.

ಉತ್ತಮ ಗಸ್ತು ಕರ್ತವ್ಯ ವಿಭಾಗದಲ್ಲಿ ಶಿರಸಿ ವಿಭಾಗದಿಂದ ಈ ಗೌರವಕ್ಕೆ ಅವರು ಭಾಜನರಾಗಿದ್ದಾರೆ.

ಉತ್ತಮ ಗಸ್ತು ಸೇವೆಗೆ ಸಂದ ಗೌರವ:

ಸಿದ್ದಾಪುರ ಘಟಕಕ್ಕೆ ಸೇರಿದ ಶಂಕರಮೂರ್ತಿ ನಾಯ್ಕ ಅವರು ಪ್ರಸ್ತುತ ಬನವಾಸಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೊಂದಿಗೆ ಸದಾ ಜನಸ್ನೇಹಿಯಾಗಿ ವ್ಯವಹರಿಸುತ್ತಾ, ತಮ್ಮ ಗಸ್ತು ಕರ್ತವ್ಯವನ್ನು ಅತ್ಯಂತ ಶಿಸ್ತು ಮತ್ತು ಜವಾಬ್ದಾರಿಯಿಂದ ನಿರ್ವಹಿಸಿಕೊಂಡು ಬಂದಿರುವುದನ್ನು ಗುರುತಿಸಿ ಜಿಲ್ಲಾ ಪೊಲೀಸ್ ಇಲಾಖೆ ಈ ಪ್ರಶಸ್ತಿಯನ್ನು ನೀಡಿದೆ.

ಅಭಿನಂದನೀಯ ಸೇವೆ ಸಲ್ಲಿಸಿ ಪ್ರಶಸ್ತಿಗೆ ಭಾಜನರಾದ ಶಂಕರಮೂರ್ತಿ ಅವರಿಗೆ ಬನವಾಸಿ ಆಡಳಿತ ವಿಭಾಗದ ಆರಕ್ಷಕ ಉಪ ನಿರೀಕ್ಷಕರು (PSI) ಹಾಗೂ ಠಾಣೆಯ ಸಿಬ್ಬಂದಿವರ್ಗದವರು ಆತ್ಮೀಯವಾಗಿ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದ್ದಾರೆ.

About The Author

error: Content is protected !!